ವಿಜಯನಗರ : ಪ್ರೇಯಸಿಯ ಮಗುವನ್ನೇ ಕಾಲುವೆಗೆ ಎಸೆದು ದುರುಳನೋರ್ವ ಕೊಲೆಗೈದಿರುವ ಘಟನೆ ಜರುಗಿದೆ.
7 ವರ್ಷದ ಅಭಿ ಸಾವನ್ನಪ್ಪಿದ ಬಾಲಕ. ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಜರುಗಿದೆ.
ಕಮಲಾಪುರ ಗ್ರಾಮದ ಎಚ್ ಎಲ್ ಸಿ ಕಾಲುವೆಗೆ ಮಗು ಎಸೆದು ಹತ್ಯೆ ಮಾಡಲಾಗಿದೆ. ಘಟನೆ ನಡೆದ ಮೂರು ದಿನಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಕೊಲೆ ಆರೋಪಿ 24 ವರ್ಷದ ಓಬಳೇಶ್ ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಾಲೆಗೆ ಹೋಗಿದ್ದ ಮಗುವನ್ನ ವಾಪಸ್ ಮನೆಗೆ ಕರೆತರುವಾಗ
ದುರುಳ ಓಬಳೇಶ್ ಕಾಲುವೆಗೆ ಎಸೆದಿದ್ದಾನೆ.
ಮನೆಗೆ ಬಂದು ಮಗು ಕಾಣ್ತಿಲ್ಲ ಅಂತಾ ಪ್ರೇಯಸಿಗೆ ಓಬಳೇಶ್ ಸುಳ್ಳು ಕಥೆ ಕಟ್ಟಿದ್ದ. ಗಂಡನಿದ್ರೂ ಗಂಡನನ್ನ ತೊರೆದು ಪ್ರಿಯತಮನೊಂದಿಗೆ ಪ್ರೇಯಸಿ ಅಕ್ರಮ ಸಂಬಂಧದ ಜೀವನ ನಡೆಸುತ್ತಿದ್ದಳು. ಪ್ರೇಯಸಿ ಹಾಗೂ ಮೊದಲ ಗಂಡನಿಗೆ ಜನಿಸಿದ ಮಗುವಾದ ಹಿನ್ನೆಲೆ ದುರುಳ ಓಬಳೇಶ್ ಕೊಲೆ ಮಾಡಿದ್ದಾನೆ.