ಬೂದು ಕುಂಬಳಕಾಯಿ ಎಲ್ಲರಿಗೂ ಗೊತ್ತೇ ಇದೆ. ಇದರಿಂದ ಪೇಠಾ ಎನ್ನುವ ಪ್ರಸಿದ್ಧ ಸಿಹಿ ತಿನಿಸನ್ನೂ ತಯಾರಿಸುತ್ತಾರೆ. ಬೂದು ಕುಂಬಳಕಾಯಿಯನ್ನು ಸಾಂಬಾರಿನಲ್ಲಿಯೂ ಬಳಸುತ್ತಾರೆ. ಇದು ಔಷಧೀಯ ಗುಣಗಳನ್ನು ಹೊಂದಿರುವ ಅತ್ಯಂತ ಪೌಷ್ಟಿಕ ಆಹಾರವಾಗಿದೆ.
ಬೆಂಗಳೂರು: ಮಳೆ ನೀರು ನುಗ್ಗುವುದನ್ನು ತಡೆಯಲು DCM ಡಿಕೆಶಿ ಮಹತ್ವದ ನಿರ್ಧಾರ!
ನಿತ್ಯ ಬೆಳಗ್ಗೆ ಒಂದು ಗ್ಲಾಸ್ ಬೂದು ಕುಂಬಳಕಾಯಿ ಜ್ಯೂಸ್ ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನಗಳು ಇವೆ.
ಇದು ಅಲ್ಸರ್ನಂತಹ ಸಮಸ್ಯೆಗಳು, ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು, ಡಿಹೈಡ್ರೇಷನ್ನಿಂದಾಗು ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದು ಸಕ್ಕರೆ ಕಾಯಿಲೆ ನಿರೋಧಕವಾಗಿ, ಅಲರ್ಜಿ ಸಮಸ್ಯೆಗಳ ನಿರೋಧಕವಾಗಿ, ಖಿನ್ನತೆಯ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಒಂದು ಬೂದುಗುಂಬಳಕಾಯಿಯಲ್ಲಿ ಶೇಕಡಾ 96 ರಷ್ಟು ನೀರಿನಂಶ ಇರುತ್ತದೆ ಅದರಲ್ಲಿ ಪ್ರಮುಖ ಜೀವಸತ್ವಗಳಾದ ಕ್ಯಾಲ್ಸಿಯಂ ಮ್ಯಾಗ್ನಿಶಿಯಂ, ಪೋಟ್ಯಾಶಿಯಂ, ಜಿಂಕ್ ಹಾಗೂ ವಿಟಮಿನ್ಸ್ಗಳು ಇರುತ್ತವೆ.
ಮಾನಸಿಕ ಸಮಸ್ಯೆಗಳು ದೂರ; ಸದ್ಗುರು ಜಗ್ಗಿ ವಾಸುದೇವ್ ಅವರು ಹೇಳುವ ಪ್ರಕಾರ ನಿತ್ಯ ಒಂದು ಗ್ಲಾಸ್ ಬೂದಗುಂಬಳಕಾಯಿ ಜ್ಯೂಸ್ ಸೇವಿಸುವುದರಿಂದ ಇಡೀ ದೇಹ ಮತ್ತು ಮನಸ್ಸು ತಂಪಾಗಿ ಇರುತ್ತದೆ ಎನ್ನುತ್ತಾರೆ.
ಎನರ್ಜಿ ಬೂಸ್ಟರ್: ಈ ಒಂದು ಬೂದುಗುಂಬಳಕಾಯಿಯನ್ನು ಸೇವಿಸುವುದುರಿಂದ ದೇಹದ ಶಕ್ತಿಹೀನತೆ ಕಡಿಮೆಯಾಗಿ ಹೆಚ್ಚು ಬಲ ಬರುತ್ತದೆ. ನರಮಂಡಲಕ್ಕೆ ಹೊಸ ಶಕ್ತಿ ತುಂಬವ ಚೈತನ್ಯ ಈ ಬೂದುಗುಂಬಳಗಾಯಿಗೆ ಇದೆ ಎಂದು ಹೇಳಲಾಗುತ್ತದೆ.
ಜೀರ್ಣಶಕ್ತಿಗೆ ನೆರವು: ಇದರಲ್ಲಿ ಹೆಚ್ಚು ಹೆಚ್ಚು ನೀರಿನ ಅಂಶ ಇರುವುದರಿಂದ ಇದು ಜೀರ್ಣಕ್ರಿಯೆಗೆ ತುಂಬಾ ಸಹಾಯಕಾವಾಗಿ ಕಾರ್ಯನಿರ್ವಹಿಸುತ್ತದೆ.ಅದು ಮಾತ್ರವಲ್ಲ ಇದು ದೇಹಕ್ಕೆ ತಂಪು ನೀಡುವುದರಿಂದ ಮೂಲವ್ಯಾಧಿಯಂತ ಸಮಸ್ಯೆಗಳನ್ನು ಹತ್ತಿರ ಕೂಡ ಬರಲು ಬಿಡುವುದಿಲ್ಲ. ಇನ್ನೂ ಶೀತದಂತಹ ಸಮಸ್ಯೆ ಇರುವವರು ಈ ಒಂದು ಬೂದುಗುಂಬಳಗಾಯಿಯಿಂದ ದೂರವೇ ಇರುವುದು ಒಳ್ಳೆಯದು.
ಇದನ್ನು ನೀವು ಹಲವು ರೂಪಗಳಲ್ಲಿ ಸೇವಿಸಬಹುದು. ಇದನ್ನು ಕತ್ತರಿಸಿ ಬೀಜಗಳನ್ನೆಲ್ಲಾ ತೆಗೆದು, ಮಿಕ್ಸರ್ನಲ್ಲಿ ಕತ್ತರಿಸಿದಿ ಹೋಳು ಹಾಕಿ. ಒಂದಿಷ್ಟು ಲಿಂಬೆ ಹಣ್ಣಿನ ರಸ ಸೇರಿಸಿ, ಒಂದಿಷ್ಟು ಪುದೀನಾ ಎಲೆ ಹಾಕಿ ರುಬ್ಬಿ ಜ್ಯೂಸ್ ಮಾಡಿಕೊಂಡು ಕುಡಿಯಬಹುದು
ಕಲ್ಲಂಗಡಿ ಮತ್ತು ಇದನ್ನು ಎರಡು ಕತ್ತರಿಸಿ ಮೊಸರು ಹಾಗೂ ಜೇನು ತುಪ್ಪವನ್ನು ಸೇರಿಸಿ ತಿನ್ನುವುದರಿಂದ ಅನೇಕ ಆರೋಗ್ಯಕರ ಲಾಭಗಳಿವೆ. ಇನ್ನೂ ಇದನ್ನು ಚೆನ್ನಾಗಿ ಕಟ್ ಮಾಡಿ ಒಂದಿಷ್ಟು ಮೊಸರು, ಒಂದಿಷ್ಟು ಕರಿಮೆಣಸಿನ ಪುಡಿ, ಒಂದಿಷ್ಟು ಹುರಿದ ಜೀರಿಗೆ ಹಾಕಿ ರೈತಾ ರೀತಿ ಮಾಡಿಯೂ ಕೂಡ ಸೇವಿಸಬಹುದು.