ಶ್ರೀನಿವಾಸಪುರ:- ಅರಣ್ಯ ಇಲಾಖೆ ಸಿಬ್ಬಂದಿಯು, ಬಿಗಿ ಪೊಲೀಸ್ ಭದ್ರತೆಯಲ್ಲಿ ಸಸಿಗಳನ್ನು ನೆಟ್ಟಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೋಟಬಲ್ಲಪಲ್ಲಿ ಗ್ರಾಮದಲ್ಲಿ2023ರಲ್ಲಿ ಅರಣ್ಯ ಭೂಮಿಯೆಂದು ಒತ್ತುವರಿ ತೆರವುಗೊಳಿಸಲಾಗಿತ್ತು. ಮೂರು ಬಾರಿ ಗಿಡಗಳನ್ನು ನೆಡಲು ಬಂದಿದ್ದ ವೇಳೆ ರೈತರಿಂದ ಅಡ್ಡಿಪಡಿಸಿ ಪ್ರತಿಭಟನೆ ನಡೆಸಲಾಗಿತ್ತು.
ನಮಗೆ ಈಗಲೂ ಪಹಣಿ ಬರುತ್ತಿದೆಯೆಂದು ಇದು ನಮ್ಮದೇ ಜಮೀನೆಂದು ಆಕ್ರೋಶ ಹೊರ ಹಾಕಿದ್ದಾರೆ. ಇಂದು ಬಿಗಿಪೊಲೀಸ್ ಭದ್ರತೆಯಲ್ಲಿ ಅರಣ್ಯ ಇಲಾಖೆ ಸಸಿಗಳನ್ನು ನೆಡುತ್ತಿದ್ದಾರೆ. 100ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ 100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಸ್ಥಳಕ್ಕೆ ಕೋಲಾರ ಅಡಿಷನಲ್ ಎಸ್ ಪಿ ರವಿಶಂಕರ್ ಭೇಟಿ ನೀಡಿ ಭದ್ರತೆ ಬಗ್ಗೆ ಪರಿಶೀಲನೆ ಮಾಡಿದ್ದಾರೆ.