ಬಾಗಲಕೋಟೆ:- ನವೆಂಬರ್ ಒಂದರಂದು ರಬಕವಿಯಲ್ಲಿ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಶಂಕರಲಿಂಗ ದೇವಸ್ಥಾನದಲ್ಲಿ ಏರ್ಪಡಿಸಿದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನವಂಬರ ಒಂದರಂದು ಮುಂಜಾನೆ 9:00ಗೆ ರಬಕವಿಯ ಹಳೆಯ ಬಸ್ ನಿಲ್ದಾಣ ಸಮೀಪ ಇರುವ ಶ್ರೀ ಎಂ ವಿ ಪಟ್ಟಣ ಬಾಲಕಿಯರ ಪ್ರೌಢಶಾಲಾ ಅವಣದಲ್ಲಿ ಹಾಕಿರುವ ಭವ್ಯ ಅಲಂಕೃತ ವೇದಿಕೆಯಲ್ಲಿ ನಾಡ ದೇವಿ ಶ್ರೀ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪೂಜಿಸಲ್ಲಿಸಿ ಸಾಮೂಹಿಕ ನಾಡಗೀತೆ ಹಾಗೂ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಈ ಸಭೆಯಲ್ಲಿ ಹಿರಿಯ ಸಾಹಿತಿ ಎಂಎಸ್ ಬದಾಮಿ. ಚಿದಾನಂದ ಸೋಲಾಪುರ. ಈರಣ್ಣ ಗುಣಕಿ.ಸುಭಾಸ ಮದರಖಂಡಿ. ಪತ್ರಕರ್ತರಾದ ಪ್ರಕಾಶ ಕುಂಬಾರ. ಸಾಗರ ನಿಪ್ಪಾಣಿ. ಬಾಬು ಗಂಗಾವತಿ. ಸಿದ್ದಣ್ಣ ಮೇಣಿ. ಶ್ರೀಶೈಲ್ ಬುರ್ಲಿ. ರವೀಂದ್ರ ಅಷ್ಟಗಿ. ಪ್ರಕಾಶ್ ಸುಡಾಳ. ಯಶ್ವಂತ ವಜಂತ್ರಿ.ಮಾದೇವ ಸೊಲ್ಲಾಪುರ. ಬಸವರಾಜ ಮಟ್ಟಿಕಲ್ಲಿ. ಯಶವಂತ ವಾಗ್ಮೊರೆ .ಹಿರೇಮಠ. ಸಂಜಯ್ ಮಹೇಂದ್ರಕರ.ಯಾಶಿನ ಕಾರಭಾರೆ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ