ಚಾಮರಾಜನಗರ: ಕಾಡಾನೆಗಳ ದಾಳಿಯಿಂದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೆನ್ನವಡೆಯನಪುರ ಗ್ರಾಮದಲ್ಲಿ 10 ಎಕರೆಗೂ ಹೆಚ್ಚು ಫಸಲು ನಾಶವಾಗಿರುವ ಘಟನೆ ನಡೆದಿದೆ. ಕುಮಾರ ಎಂಬವರಿಗೆ ಸೇರಿದ 2 ಎಕರೆ ಟೊಮೆಟೊ ಹಾಗೂ ಬೀನ್ಸ್, ಶಿವಪ್ಪ ಎಂಬವರಿಗೆ ಸೇರಿದ 2 ಎಕರೆ ಬಾಳೆ ಬೆಳೆ ಮತ್ತು ಸುತ್ತಮುತ್ತಲಿನ 10 ಎಕರೆ ಪ್ರದೇಶದ ಬೆಳೆಯನ್ನು ಆನೆಗಳು ತಿಂದು ತುಳಿದು ನಾಶಪಡಿಸಿವೆ.
ಇಷ್ಟಾದರೂ ಬಂಡೀಪುರದ ಓಂಕಾರ ವಲಯದ ವಲಯಾರಣ್ಯಾಧಿಕಾರಿ ಇತ್ತ ತಲೆ ಹಾಕಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಇತ್ತೀಚಿಗಂತೂ ಪ್ರತಿನಿತ್ಯ ಕಾಡಾನೆಗಳ ಸಮಸ್ಯೆ ಆಗ್ತಿರೋದ್ರಿಂದ ರೈತರು ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಆನೆಗಳು ಕೂಡ ನಮ್ಮಂತೆ ಪ್ರಾಣಿಗಳು, ಒಂದು ಅವುಗಳನ್ನ ಸ್ಥಳಾಂತರ ಮಾಡಿ ಇಲ್ಲಾ ನಮ್ಮನ್ನ ಸ್ಥಳಾಂತರ ಮಾಡಿ ಅನ್ನೋದು ಈ ಭಾಗದ ಜನರ ಆಗ್ರಹ.
ದಿನಕ್ಕೊಂದು ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಕಾರಿ ಗೊತ್ತಾ..?
ಆದ್ರೆ ಇದ್ಯಾವ್ದರ ಬಗ್ಗೆ ತಲೆಕೆಡಿಸಿಕೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆ ಬಗ್ಗೆ ಗಮನವೇ ಹರಿಸ್ತಾ ಇಲ್ಲ. ಈ ಕುರಿತು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದ್ರೆ ಯಾವಾಗ್ಲೋ ಬರ್ತಾರೆ, ಎಲ್ಲೋ ನಿಂತು ಪಟಾಕಿ ಸಿಡಿಸಿ ಹೋಗ್ತಾರೆಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.