ಕಲಘಟಗಿ: ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಯಾವುದೇ ಪೂರ್ವ ಕಳೆದ ಮೂರು ವರ್ಷಗಳಿಂದಲೂ ವೀರರಾಣಿ ಕಿತ್ತೂರು ಚೆನ್ನಮ್ಮ ಸಿದ್ಧತೆ ಇಲ್ಲದೆ ಕಾಟಾಚಾರಕ್ಕಾಗಿ ಎನ್ನುವಂತೆ ಏರ್ಪಡಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತೋತ್ಸವ ಕಾಠ್ಯಕ್ರಮ ಗೊಂದಲದ ಗೂಡಾಗಿ ಪರಿಣಮಿಸಿತು. ಈ ಅವ್ಯವಸ್ಥೆ ಕಂಡು ಅಲ್ಲಿದ್ದವರು ಪ್ರತಿಭಟನೆಯ ಹಾದಿ ಹಿಡಿದಾಗ ತಾಲೂಕ ಆಡಳಿತ ಪರವಾಗಿ ತಹಸೀಲ್ದಾರ್ ವೀರೇಶ್ ಮುಳಗುಂದಮಠ ಕ್ಷಮೆ ಕೇಳಿದ ಪ್ರಸಂಗ ನಡೆಯಿತು. ತಾಲೂಕಾ ಆಡಳಿತ ಜಯಂತಿ ಸೇರಿದಂತೆ ಎಲ್ಲ ಮಹನೀಯರ ಜಯಂತಿಗಳನ್ನು ಆಚರಿಸಲು ನಿರ್ಲಕ್ಷ ಮಾಡಲಾಗುತ್ತಿದೆ.
ಹೀಗೇ ಮುಂದುವರಿಯಲು ನಾವು ಬಿಡುವು ದಿಲ್ಲ ಎಂದು ತಾಲೂಕ ಪಂಚಮಸಾಲಿ ಸಮಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಘಟಕ ತಾಲೂಕ ಆಡಳಿತವನ್ನು ತರಾಟೆಗೆ ತೆಗೆದು ಕೊಳ್ಳುತ್ತಿದ್ದಂತೆ ಸ್ವಲ್ಪ ಹೊತ್ತು ಕಾರಕ್ರಮ ಗೊಂದಲದ ಗೂಡಾಯಿತು. ನಂತರ ತಹಸೀಲ್ದಾರ್ ಅವರು ಮಾತನಾಡಿ,
DRDO CAIR Recruitment: ಎಂಜಿನಿಯರಿಂಗ್ ಮುಗಿಸಿದ್ರೂ ಕೆಲಸ ಸಿಗ್ತಿಲ್ವಾ.? ಇಲ್ಲಿದೆ ನೋಡಿ ಜಾಬ್ ಆಫರ್
ಮುಂದೆ ಹೀಗಾಗದಂತೆ ಪೂರ್ವಭಾವಿ ಸಿದ್ಧತೆಯೊಂದಿಗೆ ಕಾರ್ಯಕ್ರಮ ನಡೆಸುವುದಾಗಿ, ಕಾರ್ಯಕ್ರಮಕ್ಕೆ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡುವುದಾಗಿ ಹೇಳಿದರು. ನಂತರ ಸರಳವಾಗಿ ವೀರರಾಣಿ ಕಿತ್ತೂರು ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆಯನ್ನು ಮಾಡಲಾಯಿತು. ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಈರಣ್ಣ ಗೋಕುಲ್, ಸಿ. ಬಿ. ಹೊನ್ನಹಳ್ಳಿ, ಮಂಜುನಾಥ್ ಗೌಡ ಮುರಳ್ಳಿ, ನಿಜಗುಣಿ ಕೆಲಗೇರಿ, ಉಳವಪ್ಪ ಬಳಗೇರಿ, ಬಿ. ವೈ. ಪಾಟೀಲ್, ಮಹೇಶ್ ಬೆಳಗಾಂವರ್, ಶಿವರುದ್ರ ಗೋಕುಲ್, ಶಂಕರಗೌಡ ಬಾವಿಕಟ್ಟಿ, ಬಿ. ಎಸ್. ತಿಪ್ಪನ್ನವರ್, ನಿಂಗಪ್ಪ ಬೆಳ್ಳಿವಾಲಿ
ಮಾರುತಿ ಲಮಾಣಿ, ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ವರದಿ: ಮಾರುತಿ ಲಮಾಣಿ