ವಿಜಯನಗರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿರೋ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ. ಇಬ್ಬರೇ ಸಾವನ್ನಪ್ಪಿಲ್ಲಾ, ಸಾವಿನ ಸಂಖ್ಯೆ ಐದು ಎಂದು ಹೇಳಲಾಗ್ತಿದ್ದು, ಇಲಿ ಜ್ವರದಿಂದ ಮೃತಪಟ್ಟಿದ್ದಾರೆ ಅನ್ನೋ ಅನುಮಾನ ಶುರುವಾಗಿದೆ. ಇಲಿ ಜ್ವರದಿಂದ ಮರಣಹೊಂದಿದ್ರಾ ಹರಪನಹಳ್ಳಿ ತಾಲೂಕಿನ ಟಿ. ತುಂಬಿಗೇರಿಯ ಜನರು,
ಇದುವರೆಗೆ ಇಬ್ಬರು ಸಾವು ಎನ್ನಲಾಗಿತ್ತು, ಇದುವರೆಗೆ ನವಜಾತ ಶಿಶು ಸೇರಿ 5 ಜನರು ಸಾವನ್ನಪ್ಪಿದ್ದಾರೆ. ವಾಂತಿ ಭೇದಿಯಿಂದ ಬೆಚ್ಚಿ ಬಿದ್ದ ಗ್ರಾಮಸ್ಥರು, ಸರಣಿ ಸಾವಿನಿಂದ ಕಂಗೆಟ್ಟಿದ್ದಾರೆ. ಐವತ್ತಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿಯಾಗಿದೆಯಂತೆ. ಸುರೇಶ್(30), ಮಹಾಂತೇಶ್(45) ಗೌರಮ್ಮ(60), ಹನುಮಂತಪ್ಪ (38) ಮತ್ತು ಎಂಟು ತಿಂಗಳ ಗಂಡು ಮಗು ಸಹ ಸಾವನ್ನಪ್ಪಿದೆ. ವಾಂತಿ ಭೇದಿಯಿಂದ ನರಳಿ ಚಿಕಿತ್ಸೆ ಫಲಕಾರಿಯಾಗದೇ ಸಾವು ಎಂದು ಗ್ರಾಮಸ್ಥರ ಆರೋಪವಾಗಿದೆ.
UIIC Jobs: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಭರ್ಜರಿ ಉದ್ಯೋಗಾವಕಾಶ! ಬೇಗ ಅರ್ಜಿ ಹಾಕಿ
ಗರ್ಭಿಣಿ ನಿಂಗಮ್ಮ ಎನ್ನುವವರಿಗೆ ಕಾಣಿಸಿಕೊಂಡಿದ್ದ ವಾಂತಿಭೇದಿಯಿಂದ, ಹೆರಿಗೆ ವೇಳೆ ಸಾವನ್ನಪ್ಪಿದೆ ಗಂಡು ಮಗು,ವನಲ್ಲಿಯಲ್ಲಿ ಕಲುಷಿತ ನೀರು ಬಂದು ವಾಂತಿ ಭೇದಿಯಾಗುತ್ತಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ. ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ತೋರಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಇಷ್ಟೇಲ್ಲಾ ಆದ್ರೂ ಒಂದೇ ಒಂದು ಸಾವು ಅಂತಿದೆ ವಿಜಯನಗರ ಜಿಲ್ಲಾಡಳಿತ. ವಿಜಯನಗರ ಜಿಪಂ ಸಿಇಓಗೆ ಸರಿಯಾದ ಮಾಹಿತಿಯಿಲ್ವಾ, ವಿಜಯನಗರ ಜಿಲ್ಲೆಯಲ್ಲಿದ್ರೂ ಹರಪನಹಳ್ಳಿಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳದ ಆರೋಗ್ಯ ಸಚಿವ,
ಆರೋಗ್ಯ ಸಚಿವರ ಜತೆ, ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ರು. ಸಾವಿನ ಮನೆಗೆ ಹೋಗಿ ಸಾಂತ್ವಾನ ಹೇಳದ ಆರೋಗ್ಯ ಸಚಿವ, ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ವಿಜಯನಗರದಲ್ಲಿ ಐದು, ಐದು ಸಾವಾಗಿದ್ರೂ ಕೂಡ, ಸರಿಯಾದ ಮಾಹಿತಿ ಇಲ್ಲಾ ಎಂದರೆ ಆರೋಗ್ಯ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.