ಕಲಘಟಗಿ( ಧಾರವಾಡ) : ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಹೆದ್ದಾರಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಬೆಂಗಳೂರಿನಲ್ಲಿ ಕಟ್ಟಡ ದುರಂತ ಪ್ರಕರಣ: ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಕೇಂದ್ರ!
ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ 23 – 24 ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಗೋವಿನ ಜೋಳ, ಸೋಯಾಬಿನ್, ಕಬ್ಬು, ಹಾಗೂ ತೋಟಗಾರಿಕೆ ಬೆಳೆಗಳು ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದು ಸರ್ಕಾರ ಕೂಡಲೇ ಬೆಳೆ ಹಾನಿ ಪ್ರತಿ ಎಕ್ಕರೆಗೆ ತಲಾ 30,000 ಸಾವಿರ ಗಳನ್ನು ರೈತರ ಖಾತೆಗೆ ಕೂಡಲೇ ಜಮೆ ಮಾಡಿ ಸರ್ಕಾರ ಜಾರಿಗೊಳಿಸಬೇಕು . 23 – 24 ನೇ ಸಾಲಿನ ಎಲ್ಲಾ ಬೆಳೆಗಳಿಗೂ ಸಂಪೂರ್ಣ ಬೆಳೆ ವಿಮೆಗೆ ಪಟ್ಟಿಗೆ ಸೇರಿಸಿ ಇದರ ಜೊತೆಗೆ ಡಾ. ಸ್ವಾಮಿನಾಥನ್ ವರದಿಯಂತೆ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು,ವಿಪರೀತ ಮಳೆಯಿಂದಾಗಿ ರಸ್ತೆ ನಾಲ ಕೆರೆಕಟ್ಟಿಗಳು ಸಂಪೂರ್ಣ ಹಾಳಾಗಿದ್ದು ಇಲ್ಲಿಯವರೆಗೂ ಒಬ್ಬ ಅಧಿಕಾರಿಯು ವೀಕ್ಷಣೆಗೆ ಬಂದಿಲ್ಲ ತುರ್ತು ನಮ್ಮ ಮನವಿಗೆ ಸ್ಪಂದಿಸಿದಿದ್ದರೆ.ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಎಫ್ ಕೆ ಪೂಜಾರ್. ಸಿದ್ದಯ್ಯ ಕಟ್ನೂರುಮಠ. ಸಿದ್ದಣ್ಣ ಬಾಗೇವಾಡಿ. ಅನ್ನಪೂರ್ಣ ಪಾಟೀಲ್. ಜಾಯನಗೌಡರು. ಬಸವರಾಜ್ ರೊಟ್ಟಿ. ಮಂಜಯ್ಯ ಅಣ್ಣಿಗೇರಿ. ರುದ್ರಪ್ಪ ಗೌರಿ. ಮುದುಕಪ್ಪ ಕುರಿ. ಶರಣಯ್ಯ. ಶಂಕ್ರಮ್ಮ ಸುತಾರ.ರೈತ ಮಹಿಳೆಯರು. ತಾಲೂಕಿನ ರೈತ ಬಾಂಧವರು ಉಪಸ್ಥಿತರಿದ್ದರು.
ತಾಲೂಕಿನಾದ್ಯಂತ ರೈತರ ಬೆಳೆದ ಬೆಳೆ ಸಂಪೂರ್ಣ ಹಾಳಾಗಿದ್ದು ಕೂಡಲೆ ಸರ್ಕಾರ ಬೆಳೆ ಪರಿಹಾರ ನೀಡಲು ಮುಂದಾಗ ಬೇಕಾಗಿದೆ. ಬೆಳೆಯ ಸುತ್ತ ನೀರು ಜಲಾವೃತ್ತ ಗೊಂಡಿವೆ. ಬೆಳೆದ ಬೆಳೆ ಮೊಳಕೆ ಆವರಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಿದೆ. ಪ್ರತಿ ಹಂತದಲ್ಲೂ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ತಾಲೂಕಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ತಮ್ಮ ಸ್ವಂತ ಕ್ಷೇತ್ರವನ್ನು ಮರೆತುಬಿಟ್ಟಿದ್ದಾರೆ. ವಸುದೇವ ಮೇಟಿ. ಹಸಿರು ಸೇನೆ ರಾಜ್ಯಾಧ್ಯಕ್ಷರು.