ಹುಬ್ಬಳ್ಳಿ: ಭಾರತವು 2030 ರ ವೇಳೆಗೆ ₹ 588 ಲಕ್ಷ ಕೋಟಿಯ ಆರ್ಥಿಕತೆಯತ್ತ ಸಾಗುತ್ತಿರುವಾಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ವಲಯಕ್ಕೆ ಯಾವುದೇ ಅಡಚಣೆಗಳಿಲ್ಲದ ಸಾಲದ ನೆರವನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.
2ನೇ ಮದುವೆಗೆ ಸಜ್ಜಾದ ‘ಜೊತೆ ಜೊತೆಯಲಿ’ ಮೀರಾ: ಮೊದಲ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ನಟಿ
ಈ ಸಾಲ ನೀಡುವ ಉದ್ದೇಶ ಸಾಕಾರಗೊಳಿಸಲು ಟ್ರಾನ್ಸ್ಯೂನಿಯನ್ ಸಿಬಿಲ್ ಇಂದು ಬೆಂಗಳೂರಿನಲ್ಲಿ ತನ್ನʼ ಅಭಿವೃದ್ಧಿಶೀಲ ಗ್ರಾಮೀಣ ಭಾರತಕ್ಕೆ ಸಾಲ ಸೌಲಭ್ಯ; ಬಹು-ನಗರ ಎಂಎಸ್ಎಂಇ ಸಮಾವೇಶ ʼ ಆಯೋಜಿಸಿತ್ತು.
ಉದ್ಯೋಗಗಳ ಸೃಷ್ಟಿ, ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ, ಆದಾಯದ ಅಂತರ ತಗ್ಗಿಸುವಿಕೆ, ನಾವೀನ್ಯತೆ ಹಾಗೂ ಉದ್ಯಮಶೀಲತೆ ಉತ್ತೇಜಿಸುವ ಮೂಲಕ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡುತ್ತಿರುವ ಎಂಎಸ್ಎಂಇ ವಲಯವು ದೇಶಿ ಆರ್ಥಿಕತೆಯಲ್ಲಿ ಹೊಂದಿರುವ ಮಹತ್ವದ ಮೇಲೆ ಈ ಸಮಾವೇಶ ಬೆಳಕು ಚೆಲ್ಲಿದೆ ಎಂದುವಹಿವಾಟು ಅಭಿವೃದ್ಧಿ ಅಧಿಕಾರಿ ಮಾನಸ್ ರಂಜನ್ ಮಿಶ್ರಾ ಮತ್ತು ಕ್ರೆಡಿಟ್ ಸೈಸನ್ ಇಂಡಿಯಾದ ಚೀಫ್ ರಿಸ್ಕ್ ಆಫೀಸರ್ ಅನುಜ್ ಗುಪ್ತಾ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು
ʼಎಂಎಸ್ಎಂಇʼಗಳ ಸಾಲದ ಖಾತೆಯ ಸುಸ್ಥಿರ ಬೆಳವಣಿಗೆ ಖಾತ್ರಿಪಡಿಸಿಕೊಳ್ಳುವಾಗ ʼಎಂಎಸ್ಎಂಇʼ-ಗಳಿಗೆ ಸುಲಭವಾಗಿ ಹಣಕಾಸು ಸೌಲಭ್ಯ ದೊರೆಯುವುದರ ಒಳನೋಟಗಳು, ಮಾಹಿತಿ ಮತ್ತು ವಿಶ್ಲೇಷಣಾ ಪರಿಹಾರಗಳ ಆಳವಾದ ತಿಳಿವಳಿಕೆಯೊಂದಿಗೆ ದೇಶದಾದ್ಯಂತ ʼಎಂಎಸ್ಎಂಇʼಗಳಿಗೆ ಸಾಲ ನೀಡುವ ಹಣಕಾಸು ಸಂಸ್ಥೆಗಳನ್ನು ಸಬಲಗೊಳಿಸುವುದೂ ಈ ಸಮಾವೇಶದ ಉದ್ದೇಶವಾಗಿದೆ.
ಈ ಪ್ರದೇಶದ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ರು. ಕರ್ನಾಟಕದಲ್ಲಿ ʼಎಂಎಸ್ಎಂಇʼಗಳಿಗೆ ಸಾಲ ನೀಡಿಕೆಯಲ್ಲಿ ಖಾಸಗಿ ವಲಯದ ಬ್ಯಾಂಕ್ಗಳು ದೊಡ್ಡ ಪಾತ್ರ ನಿರ್ವಹಿಸುತ್ತಿವೆ. 2024ರ ಜೂನ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿನ ಒಟ್ಟು ಸಾಲದಲ್ಲಿ ಖಾಸಗಿ ಬ್ಯಾಂಕ್ಗಳು ಶೇ 30ರಷ್ಟು ಪಾಲು ಹೊಂದಿವೆ. ಈ ಸಾಲದಲ್ಲಿ ಶೇ 24ರಷ್ಟು ತಯಾರಿಕಾ ವಲಯಕ್ಕೆ ವಿತರಿಸಲಾಗಿದೆ.
ರಾಜ್ಯದಲ್ಲಿ ವಿತರಿಸಲಾದ ʼಎಂಎಸ್ಎಂಇʼ ಒಟ್ಟಾರೆ ಸಾಲದಲ್ಲಿ ಶೇ 28ರಷ್ಟು ಸಾಲಗಳು ಸ್ವತ್ತುಗಳ ಆಧಾರ ಇಲ್ಲದೇ ನೀಡಿದ ಅಸುರಕ್ಷಿತ ಉದ್ದಿಮೆ ಸಾಲಗಳಾಗಿವೆ. ಕಡಿಮೆ ನಷ್ಟ ಸಾಧ್ಯತೆಯ ಸಾಲ ವಲಯಗಳಾದ ಉದಾಹರಣೆಗೆ ಸಿಬಿಲ್ ಎಂಎಸ್ಎಂಇ ಶ್ರೇಣಿ 1-3 ಇದ್ದು, ಇದು ಶೇ 49ಕ್ಕೆ ಗರಿಷ್ಠ ಮಟ್ಟದಲ್ಲಿ ಇದೆ.
ಅತಿ ಹೆಚ್ಚಿನ ಪ್ರಮಾಣದ ʼಎಂಎಸ್ಎಂಇʼ ಸಾಲ ವಿತರಣೆ ಇರುವ ಕರ್ನಾಟಕದ ಮುಂಚೂಣಿ ನಗರಗಳ ಸಾಲಿನಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರು ಸೇರ್ಪಡೆಗೊಂಡಿವೆ. ʼಎಂಎಸ್ಎಂಇʼಗಳಿಗೆ ಸಾಲ ನೀಡುವಲ್ಲಿ ಖಾಸಗಿ ವಲಯದ ಬ್ಯಾಂಕ್ಗಳು ಅತ್ಯಧಿಕ ಪಾಲು ಹೊಂದಿರುವ ರಾಜ್ಯ-ವ್ಯಾಪಿ ಪ್ರವೃತ್ತಿಯು ಬೆಂಗಳೂರು (ಶೇ 35) ಮತ್ತು ಹುಬ್ಬಳ್ಳಿ- ಧಾರವಾಡ (ಶೇ 40) ನಗರಗಳಲ್ಲಿ ಪ್ರತಿಫಲಿಸುತ್ತದೆ ಎಂದಿದ್ದಾರೆ