ಮುಳಬಾಗಿಲು: ಮಾಜಿ ಶಾಸಕ ಸಿ.ಪಿ .ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಬೇಸರ ತಂದಿದೆ ಎಂದು ಮಾಜಿ ಸಚಿವ ಅಶ್ವಥ್ ನಾರಾಯಾಣ ಅವರು ಹೇಳಿದರು. .ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಕ್ಷೇತ್ರದ ಶೃಂಗೇರಿ ಶಾರದ ಪೀಠದಲ್ಲಿ ಪಟ್ಟಾಭಿಷೇಕದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,
ಕಾಂಗ್ರೇಸ್ ವಿರುದ್ದ ಬಹಳ ಸ್ಪಷ್ಟವಾಗಿ, ಗಟ್ಟಿಯಾಗಿದ್ದವರು.ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದ ಬಲವಾಗಿ ಇದ್ದವರು.ಯಾವ ಕಾರಣಕ್ಕೆ ಕಾಂಗ್ರೆಸ್ ಕಡೆ ವಾಲಿದ್ದಾರೆ ಎಂಬುದು ಗೊತ್ತಿಲ್ಲ. ಬಿಜೆಪಿಯಲ್ಲಿ ಅವರಿಗೆ ಉತ್ತಮ ಸ್ಥಾನ ಮಾನಗಳು ಸಿಕ್ಕಿತ್ತು. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.
UIIC Jobs: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಭರ್ಜರಿ ಉದ್ಯೋಗಾವಕಾಶ! ಬೇಗ ಅರ್ಜಿ ಹಾಕಿ
ಚನ್ನಪಟ್ಟಣದಲ್ಲಿ ಬಿಜೆಪಿಯಿಂದಲೆ ಅಭ್ಯರ್ಥಿ ಮಾಡುವ ಇಂಗಿತ ಇತ್ತು.ಆದ್ರೆ ಕೆಲವು ಕಾರಣಗಳಿಂದ ಅವರಿಗೆ ನೋವಾಗಿದೆ ಎಂದರು. ಇಂತಹ ಅಲೋಚನೆಗಳು ಬಂದಾಗ ಅವಕಾಶವಾದ ರಾಜಕಾರಣ ಅಗಲಿದ.ಬಿಜೆಪಿ ಯಲ್ಲಿ ಸ್ಪರ್ಧೆ ಗೆ ಹಿನ್ನಡೆಯಾಗುತ್ತೆ ಅನ್ನೋ ಕಾರಣಕ್ಕೆ ಅವರು ಕಾಂಗ್ರೆಸ್ ಸೇರುವ ಮೂಲಕ ತಪ್ಪು ನಡೆ, ತಪ್ಪು ನಿರ್ಧಾರವನ್ನು ತೆಗೆದುಕೊಂಡು ಇದ್ದಾರೆ.