ಬೆಂಗಳೂರು: ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡ ಕ್ಷಣಕ್ಕೊಂದು ರೋಚಕ ತಿರುವು ಪಡೆಯುತ್ತಿದೆ.ಸಿ.ಪಿ.ಯೋಗೇಶ್ವರ್ ಯಾವ ಪಕ್ಷದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದೇ ಕೂತೂಹಲ ಕೆರಳಿಸಿದೆ.ಯಾಕೆಂದ್ರೆ,ಒಂದು ಕಡೆ ಸೈನಿಕನಿಗೆ ಕಾಂಗ್ರೆಸ್ ಆಫರ್ ನೀಡಿದ್ರೆ,ಸಿ.ಪಿ ಯೋಗೇಶ್ವರ್ ನನ್ನ ಬಿಜೆಪಿಯಲ್ಲೇ ಉಳಿಸಿಕೊಳ್ಳಲು ಕೇಸರಿ ಕಲಿಗಳು ಕಸರತ್ತು ಮುಂದುವರೆಸಿದ್ದಾರೆ.ಅತ್ತ ದಳ ಕೂಡ ಸಿ.ಪಿ.ಯೋಗೇಶ್ವರ್ ಕ್ಷಣಕ್ಕೊಂದು ನಿರ್ಧಾರಕ್ಕೆ ಕಂಗಾಲಾಗಿದ್ದಾರೆ.
ಯೆಸ್.. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ. ಯಾರೂ ಮಿತ್ರರಲ್ಲ ಅನ್ನೋದು ಮತ್ತೊಮ್ಮೆ ಸಾಭೀತಾಗ್ತಿದೆ.. 2019 ರಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರವನ್ನ ಕೆಡವಿದ್ದವರ ಜೊತೆ ಇಂದು ಇದೇ ಡಿ.ಕೆ ಶಿವಕುಮಾರ್, ಸಖ್ಯ ಬೆಳೆಸಲು ಹೊರಟಿದ್ದಾರೆ.. ಮೈತ್ರಿ ಸರ್ಕಾರ ಬೀಳಿಸಿ, ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಿಂದ ಕೆಳಗಿಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ,
ರೈತರೇ ಗಮನಿಸಿ.. ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಅಕೌಂಟ್ ಸೇರಲ್ಲ ಪಿಎಂ ಕಿಸಾನ್ ಹಣ!
ಸಿಪಿ ಯೋಗೇಶ್ವರ್ ಗೆ ಡಿಕೆ ಬ್ರದರ್ಸ್ ಗಾಳ ಹಾಕಿದ್ದಾರೆ. ಈಗ ಬದ್ದ ಶತ್ರು ಆಗಿರೋ ಹೆಚ್ ಡಿ ಕುಮಾರಸ್ವಾಮಿಯನ್ನ ಬೈ ಎಲೆಕ್ಷನ್ ನಲ್ಲಿ ಅಣಿಯಲು ಸಿಪಿವೈಗೆ ಗಾಳ ಹಾಕಿದ್ದಾರೆ.ಈ ಹಿನ್ನಲೆಯಲ್ಲಿ ಪಕ್ಷದ ಸಿದ್ಧಾಂತ ಮೆಚ್ಚಿ ಯಾರೇ ಪಕ್ಷಕ್ಕೆ ಬಂದರೂ ನಾವು ಸ್ವಾಗತ ಮಾಡ್ತೀವಿ ಕೈ ನಾಯಕರು ಇದೀಗ ಹೇಳಿಕೆಯನ್ನ ನೀಡುತ್ತಿದ್ದಾರೆ.ಇದ್ರಿಂದ ಸಿ.ಪಿ.ಯೋಗೇಶ್ವರ್ ನಡೆ ಇನ್ನು ನಿಗೂಢವಾಗಿದೆ.