ಬೆಂಗಳೂರು: ಚನ್ನಪಟ್ಟಣ ಅಖಾಡದಲ್ಲಿ ಸಿ.ಪಿ.ಯೋಗೇಶ್ವರ್ ಗೆಲ್ಲೋ ಕುದುರೆ.ಈ ಹಿನ್ನಲೆಯಲ್ಲಿ ಸೈನಿಕನಿಗೆ ಭರ್ಜರಿಗೆ ಆಫರ್ ಗಳು ಸಿಗುತ್ತಿದೆ.ಕಾಂಗ್ರೆಸ್ ಪಕ್ಷಕ್ಕೆ ಬಂದ್ರೆ ಚುನಾವಣಾ ಖರ್ಚು-ವೆಚ್ಚ ನೋಡಿಕೊಳ್ಳುವ ಭರವಸೆಯನ್ನ ಕೊಟ್ಟಿದ್ದಾರೆಂತೆ.ಜೊತೆಗೆ ಕ್ಷೇತ್ರೆ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡುವ ಆಮಿಷವನ್ನ ಕೈ ನಾಯಕರು ನೀಡಿದ್ದಾರಂತೆ.
ರೈತರೇ ಗಮನಿಸಿ.. ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ಅಕೌಂಟ್ ಸೇರಲ್ಲ ಪಿಎಂ ಕಿಸಾನ್ ಹಣ!
ಈ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗುವ ಮುನ್ಸೂಚನೆ ನೀಡಿದ್ದ ಸಿಪಿವೈ,ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗುವ ಬಗ್ಗೆಯೂ ಆಪ್ತರ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.ಇಂದು ಚನ್ನಪಟ್ಟಣ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿಪಿವೈ ಯಾವ ಚಿಹ್ನೆಯಡಿ ಸ್ಪರ್ಧೆ ಎಂದು ನಾಳೆ ಹೇಳುತ್ತೇನೆ. ಗುರುವಾರ 11 ಗಂಟೆಗೆ ಉಮೇದುವಾರಿಕೆ ಸಲ್ಲಿಸುತ್ತೇನೆಂದು ಸಿಪಿವೈ ಘೋಷಣೆ ಮಾಡಿದ್ದಾರೆ.