ಮಾಲೂರು : ದನಕರುಗಳು ಹಾಗೂ ಜಾನುವಾರುಗಳಿಗೆ ಬರುವ ಕೆಲವು ರೋಗಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರದ ವತಿಯಿಂದ ರಾಸುಗಳಿಗೆ ಉಚಿತ ಕಾಲುಬಾಯಿ ಲಸಿಕೆಯನ್ನು ಪ್ರತಿಯೊಬ್ಬರು ತಮ್ಮ ಜಾನುವಾರುಗಳಿಗೆ ಹಾಕಿಸಿಕೊಳ್ಳಬೇಕೆಂದು ಅದರಿಂದ ಕಾಲುಬಾಯಿ ಜ್ವರ ಬರದಂತೆ ಜಾಗ್ರತೆ ವಹಿಸಬೇಕೆಂದು ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರು ತಿಳಿಸಿದರು.
ನೆಲದ ಮೇಲೆ ಕುಳಿತು ವಿಶೇಷಚೇತನ ವ್ಯಕ್ತಿಯ ಸಮಸ್ಯೆ ಆಲಿಸಿದ ಕಾರ್ಮಿಕ ಸಚಿವ!
ಟೇಕಲ್ನ ಸ್ವಗ್ರಾಮ ಕೊಮ್ಮನಹಳ್ಳಿಯ ಹಾಲು ಉತ್ಪಾದಕ ಬಿಎಂಸಿ ಕೇಂದ್ರದ ಬಳಿ ಸೋಮವಾರ ಹಮ್ಮಿಕೊಂಡಿದ್ದ ಕೋಲಾರ ಜಿಲ್ಲಾ ಪಶುಪಾಲನ ಮತ್ತು ಪಶುವೈದ್ಯಕೀಯ ಇಲಾಖೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಯೋಗದೊಂದಿಗೆ ಹಸುವೊಂದಕ್ಕೆ ಲಸಿಕೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಮಾತನಾಡಿದರು,
ಇಂದಿನಿಂದ ಒಂದು ತಿಂಗಳ ಕಾಲ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರಾಸುಗಳಿಗೆ ಲಸಿಕೆ ನೀಡಲಾಗುತ್ತಿದ್ದು ಇದರ ಸದುಪಯೋಗ ಎಲ್ಲರು ಪಡೆದುಕೊಳ್ಳಬೇಕು ಇದರಿಂದ ಕಾಲುಬಾಯಿ ಜ್ವರ, ಗಂಟು ರೋಗ ತಡೆಗಟ್ಟಬಹುದು. ರೈತರಿಗೆ ಉಪಯೋಗವಾಗುತ್ತದೆ. ಆಕಸ್ಮಿಕ ರಾಸುಗಳಿಗೆ ಕಾಲುಬಾಯಿ ಜ್ವರ ಬಂದಾಗ ರಾಸು ಹಾಲು ನೀಡುವುದು ಕಡಿಮೆಯಾಗಿ ಮರಣವು ಹೊಂದುವ ಸಂಭವವು ಉಂಟು ಅದರಿಂದ ರೈತರಿಗೆ ತೊಂದರೆಯಾಗುತ್ತದೆ ಎಂದು ರಾಜ್ಯ ಸರ್ಕಾರವೇ ಉಚಿತವಾಗಿ ರಾಜ್ಯಾದ್ಯಂತ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಕೋಲಾರ ಒಕ್ಕೂಟವು ತನ್ನದೇ ಗುಣಮಟ್ಟದ ಹಾಲು ನೀಡಿ ಹೆಸರನ್ನು ಪಡೆದಿದೆ. ಅದರಂತೆ ಸೋಲಾರ್ ಪ್ಲಾಂಟ್ ಎಂವಿಕೆ ಗೋಲ್ಡನ್ ಡೈರಿ ನಿರ್ಮಾಣ ಹಂತ, ಐಸ್ಕ್ರೀಂ ಪಾರ್ಲರ್, ಹಾಲು ಉತ್ಪಾದಕರ ಮಕ್ಕಳಿಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಲು ಸುಸಜ್ಜಿತ ಹಾಸ್ಟೆಲ್ ನಿರ್ಮಾಣ, ಮೆಗಾ ಡೈರಿಯಲ್ಲಿ ಯಂತ್ರೋಪಕರಣ ಅಳವಡಿಕೆ, ರಾಸುಗಳಿಗೆ ವಿಮಾ ಪಾಲಿಸಿ ಇನ್ನೂ ಹಲವಾರು ಯೋಜನೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು