ಗದಗ:- ಶಕ್ತಿ ಯೋಜನೆ ಪರಿಣಾಮ ಜಿಲ್ಲೆಯ ಬಹುತೇಕ ಮಾರ್ಗದ ಬಸ್ಸುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದ್ದು, ಶಾಲಾ ಕಾಲೇಜಿಗೆ ತೆರಳುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂಚಾರಕ್ಕೆ ಪರದಾಡುವಂತಾಗಿದೆ.
ಅದರಂತೆ ಇಲ್ಲೊಂದು ಘಟನೆ ಜರುಗಿದ್ದು, ನೂಕು ನುಗ್ಗಲಿನಲ್ಲಿ ಬಸ್ ಹತ್ತಲು ಹೋಗಿ ಬಾಲಕಿ ಅಸ್ವಸ್ಥಗೊಂಡಿದ್ದಾಳೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಘಟನೆ ಜರುಗಿದೆ.
ಬೆಂಗಳೂರಿಂದ ಲಕ್ಷ್ಮೇಶ್ವರ ಮೂಲಕ ಗದಗ ತಲುಪುವ ಬಸ್ ಇದಾಗಿದ್ದು, ಎಲ್ಲಾ ಬಸ್ ಗಳು ರಶ್ ಆಗಿದ್ದರಿಂದ ಪ್ರಯಾಣಿಕರು ಬಸ್ ಹತ್ತಲು ಹೋಗಿ ಪರದಾಟ ನಡೆಸಿದ್ದಾರೆ. ಗದಗ ಹೋಗಲು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಜಮಾವಣೆಗೊಂಡಿದ್ದರು.
ಈ ವೇಳೆ ಜನರ ಮಧ್ಯ ತೂರಿಕೊಂಡು ಬಸ್ ಏರಲು ಬಾಲಕಿ ಮುಂದಾಗಿದ್ದರು. ನೂಕು ನುಗ್ಗಲಿಗೆ ಸಿಕ್ಕು ಬಾಲಕಿ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಕೂಡಲೇ ಸಹ ಪ್ರಯಾಣಿಕರು ಬಾಲಕಿಯನ್ನು ಹಾರೈಕೆ ಮಾಡಿದ್ದಾರೆ.