ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆಯ ಸಿಂಚನವಾಗಿದೆ. ಚಂಡಮಾರುತದ ಎಫೆಕ್ಟ್ನಿಂದ ಭರ್ಜರಿಯಾಗಿ ಸುರಿದ ಬಳಿಕ ಮಳೆ ಎರಡು ದಿನ ಬಿಡುವು ಕೊಟ್ಟಿತ್ತು. ಈಗ ಬೆಳ್ಳಂಬೆಳಗ್ಗೆ ತುಂತುರು ಮಳೆ ಸುರಿದಿದೆ. ಅದಲ್ಲದೆ ಅಲ್ಲದೇ ನಗರದ ಪ್ರತಿಷ್ಟಿತ ಸಾಯಿ ಲೇಔಟ್ ಇಂದು ಕೂಡ ಜಲಾವೃತವಾಗಿದೆ.
500 ಮನೆಗಳಿರೋ ಪ್ರತಿಷ್ಠಿತ ಬಡಾವಣೆ ಇದಾಗಿದ್ದು, 10 ವರ್ಷಗಳಿಂದ ಅದೇ ಜಲ ಸಂಕಷ್ಟ ಎದುರಿಸುತ್ತಿದ್ದಾರೆ. ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದೆ ಪರದಾಟ ಮಾಡಿದ್ದಾರೆ. ರಸ್ತೆಯಲ್ಲೇ ಕೊಳಕು ನೀರು ನಿಂತಿದ್ದು, ರೋಸಿ ಹೋದ ಜನರಿಂದ ರಸ್ತೆ ತಡೆಗೆ ಪ್ಲ್ಯಾನ್ ಮಾಡಲಾಗಿದೆ.
ಪ್ರತಿರಾತ್ರಿ ಮೊಸರು ತಿನ್ನುತ್ತಿದ್ರೆ, ಇಂದಿನಿಂದ ಆ ಅಭ್ಯಾಸ ಬಿಟ್ಬಿಡಿ: ಆಯುರ್ವೇದ ತಜ್ಞರ ಸಲಹೆ ಹೀಗಿದೆ
ಹೇಳಿಯಷ್ಟು ಹೇಳಿ ಆಯ್ತು ನೋಡುವಷ್ಟು ನೋಡಿ ಆಯ್ತು. ಇನ್ನು ತಾಳ್ಮೆ ನಮ್ಮ ಬಳಿ ಇಲ್ಲ ಅಂತ ಜನಾಕ್ರೋಶ ವ್ಯಕ್ತವಾಗಿದೆ. ನಿನ್ನೆ 5 ನಿಮಿಷದ ಮಳೆಗೆ ಏರಿಯಾ ತುಂಬಾ ನೀರು ತುಂಬಿದೆ. ಮೊನ್ನೆಯಷ್ಟೇ ಫೈರ್ ಇಂಜಿನ್ ಬಂದು ನೀರು ಹೊರ ಹಾಕಿತ್ತು. ಈಗ ಮತ್ತೇ ರಸ್ತೆಯಲ್ಲಿ ನೀರು ತುಂಬಿ ಜನ ಹೈರಾಣಾಗಿದ್ದಾರೆ.
ಮೊನ್ನೆಯ ಮಳೆಗೆ ತುಂಬಿದ ನೀರಿನ ಎಫೆಕ್ಟ್ ಉಂಟಾಗಿದೆ. ಮನೆಯ ಫರ್ನಿಚರ್, ದುಬಾರಿ ಐಟೆಮ್ಸ್ ಹಾಳಾಗಿದೆ. ಈ ಮಧ್ಯೆ ಮತ್ತೆ ಮಳೆಯ ಎಫ್ಫೆಕ್ಟ್ ಜಲಾವೃತ ಆದ ಮನೆ ಅಂತ ಅಳಲು ತೋಡಿಕೊಂಡಿದ್ದಾರೆ. ಇಂದು ರಸ್ತೆ ತಡೆದು ಪ್ರತಿಭಟನೆ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.