ಚಾಮರಾಜನಗರ:- ಪವಾಡ ಪುರುಷ ಮಾದಪ್ಪನ ದರ್ಶನ ಪಡೆಯಲು ಕಾಲ್ನಡಿಗೆಯಲ್ಲಿ ತೆರಳಿದ್ದ ಭಕ್ತರಿಗೆ ಭಾರೀ ಗಾತ್ರದ ಒಂಟಿ ಸಲಗವೊಂದು ಭಕ್ತರಿಗೆ ಎದುರಾಗಿ ಆತಂಕ ಸೃಷ್ಟಿಸಿದ ಘಟನೆ ನಡೆಯಿತು.
ಪೈಪ್ ಲೈನ್ ದುರಸ್ಥಿ ವೇಳೆ ಮಣ್ಣು ಕುಸಿತ: ಚಿಕಿತ್ಸೆ ಫಲಿಸದೇ ಓರ್ವ ಸಾವು, ಮತ್ತೋರ್ವ ಗಂಭೀರ!
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ
ಪವಾಡ ಪುರುಷ ಮಲೆಮಹದೇಶ್ವರಬೆಟ್ಟದಲ್ಲಿ ದರ್ಶನಕ್ಕೆ ತೆರಳಿದ್ದ ಮಾದಪ್ಪನ ಭಕ್ತರಿಗೆ ರಸ್ತೆ ಮದ್ಯೆ ಒಂಟಿ ಸಲಗವೊಂದು ಏಕಾಏಕಿ ನುಗ್ಗಿ ಮಾದಪ್ಪನ ಭಕ್ತರಿಗೆ ಆತಂಕ ಸೃಷ್ಟಿಸಿದೆ ಘಟನೆ ನಡೆದಿದೆ. ದೇವರ ದರ್ಶನ ಪಡೆಯಲು ಕಾಡಿನೊಳಗೆ ಕಾಲ್ನಡಿಯಲ್ಲಿ ತೆರಳಿದ್ದ ಭಕ್ತರು ಸ್ವಲ್ಪ ಆಂತರದಲ್ಲಿ ಪವಾಡದಂತೆ ಪಾರಾಗಿದ್ದಾರೆ.
ದಕ್ಷಿಣ ಕರ್ನಾಟಕದ ಪವಾಡ ಪುರುಷ ಮಲೆಮಹದೇಶ್ವರಬೆಟ್ಟಕ್ಕೆ ಮಾದಪ್ಪನ ದರ್ಶನ ಭಾಗ್ಯ ಪಡೆಯಲು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತರು ಪ್ರತಿನಿತ್ಯ ತೆರಳುತ್ತಾರೆ.
ಈ ವೇಳೆ ಕಾಡಿನ ಮದ್ಯೆ ಇಂದು ಬೆಳಿಗ್ಗೆ ಒಂಟಿಸಲಗವೊಂದು ರಸ್ತೆಗೆ ಅಡ್ಡಲಾಗಿ ನಿಂತು ಆರ್ಭಟಿಸಿ ಭಕ್ತರಿಗೆ ಆತಂಕ ಸೃಷ್ಟಿಸಿದ ಘಟನೆ ನಡೆಯಿತು.
ಕರ್ನಾಟಕ ತಮಿಳುನಾಡಿನ ಸಹಸ್ರಾರು ಭಕ್ತರು ಮಾದಪ್ಪನ ಇಷ್ಟಾರ್ಥ ಸಿದ್ದಿಗೆ ಸನ್ನಿದಿಗೆ ತೆರಳುತ್ತಾರೆ. ಹರಕೆಹೊತ್ತು ಅರಸಿಕೊಂಡು ದಟ್ಟ ಅರಣ್ಯದೊಳಗೆ ಕಾಲ್ನಡಿಯಲ್ಲಿಯೆ ಭಕ್ತರು ತೆರಳುತ್ತಾರೆ.
ಅಂತೆಯೆ ಇಂದು ಕೂಡ ಕಾಲ್ನಡಿಯಲ್ಲಿ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ರು. ಮಾರ್ಗ ಮದ್ಯೆ ರಸ್ತೆಯಲ್ಲಿಯೇ ಒಂಟಿಸಲಗವೊಂದು ಆರ್ಭಟಿಸಿದೆ
ಏಕಾಏಕಿ ರಸ್ತೆಗೆ ಅಡ್ಡಲಾಗಿ ನಿಂತು ಭಯ ಮೂಡಿಸಿದ ಒಂಟಿಸಲಗ ಕಂಡ ಭಕ್ತರು, ಉಘೇಮಾದಪ್ಪ ಉಘೇ ಉಘೇ ಮಾದಪ್ಪ ಉಘೇ ಎಂದು ಬೇಡಿಕೊಂಡಿದ್ದಾರೆ.
ಭಕ್ತರು ಝೇಂಕರಿಸುತ್ತಿದ್ದಂತೆ ಭಾರೀ ಗಾತ್ರದ ಕೊಂಬಿನ ಒಂಟಿ ಸಲಗ ಕಾಡಿನತ್ತ ಓಡಿದ್ದು ಮಾದಪ್ಪನ ಪಾವಾಡಕ್ಕೆ ಶರಣಾದ ಭಕ್ತರಾಗದ್ದಾರೆ.