ಕೋಲಾರ : Ed ಯನ್ನು ಕೇಂದ್ರ ಸರ್ಕಾರ ಬಳಕೆ ಆರೋಪಕ್ಕೆ ಕೋಲಾರದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟರು.
ಕೋಲಾರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಸಿಎಂ ಸಿದ್ದರಾಮಯ್ಯ ಅವರು ಮೂಡಾ ಹಗರಣದಲ್ಲಿ 14 ನಿವೇಶನಗಳಿಗೆ ತಮಗೆ ಸಂಬಂಧವಿಲ್ಲವೆಂದು ಹೇಳಿದವರು. ನಂತರ 65 ಕೋಟಿ ಕೊಟ್ಟರೆ ಬಿಟ್ಟಿಕೊಡುವುದಾಗಿ ಹೇಳಿದರು,ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಮೂಡಾ ಡಿನೋಟಿಪೀಕಷನ್ ಆಗುವಂತಹ ಸಂದರ್ಭದಲ್ಲಿ ಎಸ್ಸಿ ಭೂಮಿಯನ್ನು ಕಾನೂನು ಬಾಹಿರವಾಗಿ ಪ್ರಭಾವ ಬೀರಿ ತಮ್ಮ ಬಾಮೈದುನಿಗೆ ಮಾಡಿದರು.
ನಂತರ ದೇವರಾಜ್ ಅವರ ಮುಖಾಂತರ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ಮಾಡಿಸಿಕೊಂಡರು. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವಿಲ್ಲವಾ?ಮೂಡಾ ದಾಖಲೆಗಳಲ್ಲಿ ವೈಟ್ ಲೆಡ್ ಹಾಕಿ ದಾಖಲೆ ತಿರುಚಿದವರು ಯಾರು ಎಂದು ಪ್ರಶ್ನಿಸಿದ ಮುನಿಸ್ವಾಮಿ ಮೂಡಾದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿಲ್ಲವೆಂದರೆ ನಿವೇಶನಗಳನ್ನು ಏಕೆ ವಾಪಸ್ಸು ಕೊಟ್ಟರು.
ಮೂಡಾದಲ್ಲಿ 5 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದ್ದು, ಮೂಡಾ ಹಗರಣದಲ್ಲಿ ಭ್ರಷ್ಟಾಚಾರ ಆಗಿರುವ ಕಾರಣ ಅದರ ಅಧ್ಯಕ್ಷ ಮರೀಗೌಡ ರಾಜಿನಾಮೇ ಕೊಟ್ಟಿದ್ದು, ಭ್ರಷ್ಟಚಾರ ನಡೆದಿಲ್ಲವೆಂದರೆ ಅವರು ಏಕೆ ರಾಜಿನಾಮೇ ಕೊಟ್ಟರು, Ed ತನಿಖೆ ಮಾಡುವುದರಲ್ಲಿ ತಪ್ಪೇನಿದೆ ಎಂದರು.
ಇನ್ನು ವಾಲ್ಮೀಕಿ ಹಗರಣ, ಭ್ರಷ್ಟಾಚಾರ ನಡೆದಿರುವುದು ಒಪ್ಪಿಕೊಂಡು ಸಚಿವ ನಾಗೇಂದ್ರ ರಾಜಿನಾಮೇ ನೀಡಿಲ್ಲವಾ? ನಕಲಿ ಕೋ ಅಪರೇಟಿವ್ ಸೊಸೈಟಿಗಳನ್ನು ಓಪನ್ ಹಣ ವರ್ಗಾವಣೆ ಮಾಡಿದರು,ಇಷ್ಟೆಲ್ಲಾ ನಡೆದರೂ ರಾಜಿನಾಮೇ ನೀಡದ ಮೋಡು ಆಟವಾಡುತ್ತಿರುವ ಸಿದ್ದರಾಮಯ್ಯ ಅವರೇ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕಿಡಿಕಾರಿದರು.