ತುಮಕೂರು: ತುಂಬಿ ಹರಿಯುತ್ತಿರುವ ಮೂಡಲ್ ಕುಣಿಗಲ್ ಕೆರೆಗೆ ಮಾಜಿ ಸಂಸದ ಡಿ.ಕೆ ಸುರೇಶ್ ಬಾಗಿನ ಅರ್ಪಣೆ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ಕೆರೆ ಗೆ ಬಾಗಿನ ಅರ್ಪಿಸಲಾಗಿದೆ. ದೊಡ್ಡಕೆರೆಯ ಕೋಡಿಗೆ ಗಂಗಾಪೂಜೆ ಮಾಡಿ ಬಳಿಕ ಡಿಕೆ ಸುರೇಶ್ ಬಾಗಿನ ಅರ್ಪಿಸಿದ್ದಾರೆ.
ಕಾವೇರಿ ಆರತಿಯೊಂದಿಗೆ ಕುಣಿಗಲ್ ದೊಡ್ಡಕೆರೆಗೆ ಬಾಗಿನ ಅರ್ಪಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ನಿರಂತರ ಮಳೆ ಹಾಗೂ ಹೇಮಾವತಿ ನೀರಿನಿಂದ ಕುಣಿಗಲ್ ದೊಡ್ಡಕೆರೆ ತುಂಬಿ ಹರಿಯುತ್ತಿದೆ. ಡಿ.ಕೆ. ಸುರೇಶ್ ಗೆ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಸಾಥ್ ಕೊಟ್ಟಿದ್ದಾರೆ.