ಬಾಗಲಕೋಟೆ: ನನ್ನ ನೇತೃತ್ವದ ಹೊಸ ಬ್ರಿಗೇಡ್ ಗೆ 20 ರಂದು ನಾಮಕರಣಎಂದು ಬಾಗಲಕೋಟೆಯಲ್ಲಿ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಹೇಳಿದರು.
ಹಿಂದುಳಿದವರು ಹಾಗೂ ದಲಿತರನ್ನ ಎಲ್ಲರು ಬಳಸಿಕೊಳ್ಳುತ್ತಾರೆ ಆದ್ರೆ ಅವರಿಗೆ ಏನೂ ನ್ಯಾಯ ಕೊಡಬೇಕು ಕೊಡೋಕೆ ಆಗ್ತಿಲ್ಲ ಅನೇಕ ಸಣ್ಣ ಸಣ್ಣ ಸಮುದಾಯಗಳು ಸಂಘಟಿತರಾಗಿ ಹೊರಗೆ ಬರೋಕೆ ಆಗುತ್ತಿಲ್ಲ ಅವರನ್ನೆಲ್ಲ ಒಟ್ಟಿಗೆ ಸೇರಿಸಿಕೊಂಡರೆ ಅವರಿಗೂ ಒಂದು ವಿಶ್ವಾಸ ಬರುತ್ತೆ ಎಂದು ಬಾಗಲಕೋಟೆಯಲ್ಲಿ ಕೆ. ಎಸ್. ಈಶ್ವರಪ್ಪ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಹಿಂದೂ ಸಮಾಜದಲ್ಲಿ ಇದ್ದೀವಿ ನಮಗೆ ಈ ಸಮಾಜ ಬೆಂಬಲ ಕೊಡ್ತಿದೆ ನಾವು ಧೈರ್ಯವಾಗಿ ಸಂಘಟನೆಯಲ್ಲಿ ತೊಡಗಬಹುದು ಅನ್ನೋ ಭಾವನೆ ನಿರ್ಮಾಣ ಮಾಡೋದಕ್ಕೆ ಈ ವಿಶೇಷ ಬ್ರಿಗೇಡ್ ರಚನೆ ಮಾಡ್ತಿದ್ದೇವೆ ಎಂದರು
ಹಾಗೆ ಇದರಲ್ಲಿ ಎಲ್ಲ ರಾಜಕೀಯ ಪಕ್ಷದವರೂ ಇದ್ದಾರೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಜೊತೆಗೆ ಯಾವುದೇ ಪಕ್ಷದಲ್ಲಿ ಇಲ್ಲದಿರುವ ಸಾರ್ವಜನಿಕರು ಇದ್ದಾರೆ ಸಮಾಜ ಸೇವಕರು, ಸರ್ಕಾರಿ ನೌಕರರು ಜೊತೆ ಎಲ್ಲ ಜಾತಿಯವರು ಇದ್ದಾರೆ ಇದು ರಾಜಕಿಯೇತರವಾಗಿ ಮತ್ತು ಜಾತಿ ರಹಿತವಾದ ವಿಶೇಷವಾದ ಸಂಘಟನೆ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.