ಹುಬ್ಬಳ್ಳಿ; ಮೈಸೂರು ನಗರಾಭಿವೃದ್ಧಿ ಇಲಾಖೆಯ( ಮುಡಾ) ಹಗರಣದಲ್ಲಿ ಈಗ ಮುಡಾ ಅಧ್ಯಕ್ಷ ಮರಿಗೌಡ ರಾಜೀನಾಮೆ ಕೊಟ್ಟಿದ್ದು ಈಗ ಒಂದೊಂದಾಗಿ ಆದದನ್ನ ಒಪ್ಪಿಕೊಳ್ಳತಾ ಇದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಮೈಸೂರು ನಗರಾಭಿವೃದ್ಧಿ ಇಲಾಖೆಯಲ್ಲಿ ಆದ ಹಗರಣದ ಕುರಿತು ಸದನದಲ್ಲಿ ಮಾತನಾಡಲು ಹಾಗೂ ಈ ಬಗ್ಗೆ ನಿಲುವಳಿ ಸೂಚನೆ ಮಂಡನೆಗೆ ಸರ್ಕಾರ ಒಪ್ಪಲಿಲ್ಲ. ಸಾಕಷ್ಟು ನಾವು ಅಧಿವೇಶನ ನಡೆದ ಸಂದರ್ಭದಲ್ಲಿ ಕೇಳಿದವು ಆದರೆ ಸದನದಲ್ಲಿ ಯಾವುದೇ ರೀತಿಯ ಚರ್ಚೆಗೆ ಅವಕಾಶ ಸಿಗಲಿಲ್ಲ ಈಗ ಏನಾಗಿದೆ ಸೈಟ್ ವಾಪಸ್ ಕೊಟ್ಟರು ಮತ್ತೇ ಮೈಸೂರು ನಗರಾಭಿವೃದ್ಧಿ ಇಲಾಖೆಯ ಅಧ್ಯಕ್ಷ ಮರಿಗೌಡ ರಾಜೀನಾಮೆ ಕೊಟ್ಟರು.
ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರ್ತಾ ಇದ್ಯಾ..? ಹೀಗೆ ಮಾಡಿ ನಿವಾರಣೆಯಾಗುತ್ತೆ
ಇದರಿಂದ ಗೊತ್ತಾಗುತ್ತದೆ ಒಂದೊಂದು ಆಗಿ ಏನು ಆಗಿದೆ ಅಲ್ಲಿ ಭ್ರಷ್ಟಾಚಾರ ಕುರಿತು ಹಗರಣದ ಹೊರ ಬರುತ್ತೀವೆ ಎಂದರು. ಇದರ ಪರಿಣಾಮವಾಗಿ ಕೇಲವೇ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು ರಾಜೀನಾಮೆ ಕೊಡುತ್ತಾರೆ ಎಂದರು. ಇನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಉಪ ಚುನಾವಣೆಗೆ ನಮ್ಮಲ್ಲಿ ಸಾಕಷ್ಟು ಆಕಾಂಕ್ಷೆ ಗಳು ಇದ್ದಾರೆ.
ನಮ್ನ ಉಸ್ತುವಾರಿ ರಾಧಾಮೋಹನ್ ದಾಸ್ ಹಾಗೂ ಪಕ್ಷದ ಹಿರಿಯ ನಾಯಕರು ಏನು ಹೇಳುತ್ತಾರೆ ಯಾರನ್ನ ಪೈನಲ್ ಮಾಡುತ್ತಾರೆ ಅವರ ಪರವಾಗಿ ಚುನಾವಣೆ ಮಾಡುತ್ತೇವೆ ಶಿಗ್ಗಾಂವಿ ಉಪ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸೇರಿದಂತೆ ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದರು.