ಬೆಳಗಾವಿ: ಬೆಳಗಾವಿಯಲ್ಲಿ ಖಾಸಗಿ ಫೈನಾನ್ಸ್ ಮೂಲಕ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬನ ಸಾವು ಅನುಮಾನಕ್ಕೆ ಕಾರಣವಾಗಿದೆ. ಕಳೆದ ಅಕ್ಟೋಬರ್ 10 ರಂದು ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೇ ಮಗಳು ಸಾವಿನಲ್ಲಿ ಅನುಮಾನ ಇದೆ ಎನ್ನುವ ದೂರು ನೀಡಿದ್ದು. ಅಂತ್ಯಕ್ರಿಯೆ ನಡೆಸಿದ್ದ ಮೃತ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಗಳ ಅನುಮಾನ ತಾಯಿಯ ಮೇಲೆನೆ ಇದ್ದು, ವರದಿ ಬಂದ ಬಳಿಕ ಸತ್ಯ ಹೊರಬರಬೇಕಿದೆ.
ಅಂತ್ಯಕ್ರಿಯೆ ನಡೆಸಿದ್ದ ಶವವನ್ನು ಹೊರ ತೆಗೆಯುತ್ತಿರೋ ಪೌರ ಕಾರ್ಮಿಕರು, ಸ್ಥಳದಲ್ಲಿ ಮೊಕ್ಕಾಂ ಹೂಡಿರೋ ಪೊಲೀಸರು ಹಾಗೂ ಎಸಿ. ಶವವನ್ನು ಹೊರ ತೆಗೆದು ಮರೋಣತ್ತರ ಪರೀಕ್ಷೆಗೆ ಕಳುಹಿಸುತ್ತಿರೋ ಅಧಿಕಾರಿಗಳು. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ. ಯಸ್ ಖಾಸಗಿ ಪೈನಾನ್ಸ್ ಮೂಲಕ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಸಂತೋಷ ಪದ್ಮಣ್ಣವರ್(47), ಇದೇ ಅಕ್ಟೋಬರ್ 9ರಂದು ಮನೆಯಲ್ಲಿ ಬೆಳಗಿನ ಜಾವ ಮೃತಪಟ್ಟಿದ್ದರು.
DRDO Recruitment: ಈ ಇಲಾಖೆಯಲ್ಲಿದೆ ಬಂಪರ್ ಉದ್ಯೋಗಾವಕಾಶ! ಯಾವುದೇ ಲಿಖಿತ ಪರೀಕ್ಷೆ ಇಲ್ಲ – ಕೈ ತುಂಬಾ ಸಂಬಳ
ಇದೊಂದು ಸಹಜ ಸಾವು ಎಂದು ಎಲ್ಲರೂ ಅಂದುಕೊಂಡು ಲಿಂಗಾಯತ ಸಂಪ್ರದಾಯದಂತೆ ಬಂಧುಗಳು, ಸ್ನೇಹಿತರು ಸೇರಿಕೊಂಡು ಅಕ್ಟೋಬರ್ 10 ರಂದು ಅಂತ್ಯಕ್ರಿಯೆ ನಡೆಸಿದ್ದರು. ಆದರೇ ಎರಡು ದಿನಗಳ ಹಿಂದೆ ಮೃತ ಸಂತೋಷ್ ಮಗಳು ಸಂಜನಾ ಮನೆಯಲ್ಲಿ ಕುಳಿತ ಸಂದರ್ಭದಲ್ಲಿ ಮನೆಗೆ ಯಾರೆಲ್ಲ ಬಂದಿದ್ದರು ಎಂದು ಸಿಸಿಟಿವಿ ಪರಿಶೀಲನೆ ಮಾಡಿದ್ದಾಳೆ. ಈ ವೇಳೆಯಲ್ಲಿ ತಾಯಿ ಮಗಳನ್ನು ಗದರಿಸಿದ್ದು, ಸ್ಥಾನಕ್ಕೆ ಹೋಗುವಂತೆ ಹೇಳಿದ್ದಾರೆ. ಸ್ನಾನ ಮಾಡಿ ವಾಪಸ್ ಬರುವಷ್ಟರಲ್ಲಿಯೇ ತಾಯಿ ಉಮಾ ಸಿಸಿಟಿವಿ ದೃಶ್ಯವನ್ನು ಡಿಲಿಟ್ ಮಾಡಿದ್ದಳು.
ಇದರಿಂದ ಮಗಳಿಗೆ ತಂದೆಯ ಸಾವಿನ ಬಗ್ಗೆ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಸಂಜನಾ ನೇರವಾಗಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತಂದೆಯ ಸಾವಿನ ಬಗ್ಗೆ ಅನುಮಾನ ಇದೆ ತನಿಖೆ ಮಾಡುವಂತೆ ಮನವಿ ಮಾಡಿದ್ದಳು. ಇನ್ನೂ ತಂದೆ ದೇಹ ದಾನ ಮಾಡಿದ್ದು ಆದ್ರೇ ಖಾಸಗಿ ಆಸ್ಪತ್ರೆಯಲ್ಲಿ ಕೇವಲ ಕಣ್ಣು ಮಾತ್ರ ಪಡೆದುಕೊಂಡಿದ್ದು ದೇಹವನ್ನ ಪಡೆದುಕೊಂಡಿಲ್ಲ ಅನ್ನೋ ಮಾತನ್ನ ಕೂಡ ಪೊಲೀಸರ ಮುಂದೆ ಮಗಳು ಹೇಳಿದ್ದಳು. ಪುತ್ರಿಯ ಅನುಮಾನದ ಮೇರೆಗೆ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡ್ತಾರೆ.
ಇನ್ನೂ ಸಂತೋಷ ಮಗಳು ಬೆಂಗಳೂರಿನಿಲ್ಲಿ ಇಂಜನಿಯರಿಂಗ್ ಓದುತ್ತಿದ್ದು, ತಂದೆಯ ಸಾವಿನ ಬಗ್ಗೆ ಅನುಮಾನಗೊಂಡಿದ್ದಳು. ಮಗಳ ದೂರು ಹಿನ್ನೆಲೆಯಲ್ಲಿ ಸಂತೋಷ ಪದ್ಮಣ್ಣವರ್ ಮೃತ ದೇಹವನ್ನು ಹೊರ ತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆಗೆ ಪೊಲೀಸರು ಒಳಪಡಿಸಿದ್ರು. ಈ ವೇಳೆಯಲ್ಲಿ ಮೃತ ಸಂತೋಷ ಮಗಳು ಸಂಜನಾ ಹಾಗೂ ಬೆಳಗಾವಿ ಎಸಿ ಶ್ರವಣ ನಾಯಕ್ ಹಾಗೂ ಮಾಳ ಮಾರುತಿ ಪೊಲೀಸ್ ಠಾಣೆಯ ಸಿಪಿಐ ಸ್ಥಳದಲ್ಲಿ ಇದ್ದರು. ಮರಣೊತ್ತರ ಪರೀಕ್ಷೆ ವರದಿ ಬಂದ ಬಳಿಕ ಸಹಜ ಸಾವೋ, ಕೊಲೆಯೋ ಎಂಬುದು ಖಚಿತವಾಗಿ ಗೊತ್ತಾಗಲಿದೆ.
ಇನ್ನೂ ಪದ್ಮಣ್ಣವರ್ ಮನೆಗೆ ಅಪರಿಚತರು ಬಂದು ಹೋಗಿರೋದು ಸಿಸಿಟಿವಿಯಲ್ಲಿ ದಾಖಲಾಗಿದೆ. ಸಂತೋಷ್ ಅನೇಕರಿಗೆ ಬಡ್ಡಿ ಮೇಲೆ ಹಣವನ್ನು ಕೊಟ್ಟಿದ್ದನು. ಹಣದ ವ್ಯವಹಾರ ಹಿನ್ನೆಲೆಯಲ್ಲಿ ಏನಾದ್ರು ಕೊಲೆಯಾಗಿದೆಯಾ.? ಅಥವಾ ವೈಯಕ್ತಿಕ ಕಾರಣವೇನಾದ್ರು ಇದೆಯಾ..? ಎಂಬುದು ಇನ್ನೂ ಪೊಲೀಸ್ ತನಿಖೆಯಿಂದಲೇ ಗೊತ್ತಾಗಬೇಕಿದೆ. ಸದ್ಯ ಪ್ರಕರಣ ಬೆನ್ನು ಬಿದ್ದಿರುವ ಮಾಳಮಾರುತಿ ಠಾಣೆ ಪೊಲೀಸರು ಎರಡು ಟೀಮ್ ಮಾಡಿಕೊಂಡು ಸಿಸಿಟಿವಿಯಲ್ಲಿ ಸೆರೆಯಾದ ಅಪರಿಚಿತರು ಯಾರು ಅನ್ನೋದನ್ನ ತನಿಖೆ ನಡೆಸುತ್ತಿದ್ದಾರೆ.
ಹೀಗೆ ಬಂದು ಹೋದ ಇಬ್ಬರ ಪತ್ತೆಗೆ ಒಂದು ಟೀಮ್ ಬೆಂಗಳೂರು ಮತ್ತೊಂದು ಟೀಮ್ ಮಂಗಳೂರಿಗೆ ಹೋಗಿದೆ. ಇತ್ತ ಆಂಜನೇಯ ನಗರದಲ್ಲಿರುವ ಪತ್ನಿ ಉಮಾಳ ಮನೆಯಲ್ಲಿ ಒಂದು ಪೊಲೀಸ್ ಟೀಮ್ ಇದ್ದು ಮನೆಯನ್ನ ಶೋಧ ನಡೆಸಿದೆ. ಇತ್ತ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ವಿಚಾರಣೆಗೆ ಉಮಾಳನ್ನ ವಶಕ್ಕೆ ಪಡೆಯಲು ಸಿದ್ದತೆ ನಡೆಸಿದ್ದಾರೆ. ಇತ್ತ ಪೊಲೀಸರ ಪರಿಶೀಲನೆ ವೇಳೆ ಮನೆಯಲ್ಲಿ ಕೆಲ ಪೆನಡ್ರೈವ್ ಗಳು ಸಿಕ್ಕಿದ್ದು ಅದರಲ್ಲಿ ಏನಿದೆ ಅನ್ನೋದರ ಕುರಿತು ಕೂಡ ಪರಿಶೀಲನೆ ಮಾಡ್ತಿದ್ದಾರೆ.
ಸಂತೋಷ ಪದ್ಮಣ್ಣವರ್ ಸಾವಿನ ಬಗ್ಗೆ ಪತ್ನಿ ಉಮಾಳನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ಎಫ್ ಎಸ್ ಎಲ್ ಹಾಗೂ ಮರಣೋತ್ತರ ಪರೀಕ್ಷೆ ಬರೋವರೆಗೆ ಯಾವುದೇ ರೀತಿಯಲ್ಲಿ ಖಚಿವಾಗಿ ಹೇಳುವ ಸ್ಥಿತಿಯಲ್ಲಿ ಯಾರು ಇಲ್ಲ. ಮರಣೋತ್ತರ ಪರೀಕ್ಷೆ ಬಂದ ಬಳಿಕ ಸಹಜ ಸಾವಾ ಅಥವಾ ಪತ್ನಿಯೆ ಕೊಲೆ ಮಾಡಿದ್ಲಾ ಎಂಬುದು ಗೊತ್ತಾಗಬೇಕಿದೆ.