ಬೀದರ್: ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಕ್ಷೇತ್ರದ ಜನತೆಯ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿ. ನಂತರ ಜ್ಞಾನೇಶ್ವರ ಗ್ರಂಥ ಗದ್ದುಗೆಗೆ ಪೂಜೆ ನೆರವೇರಿಸಿದರು. ಸಪ್ತಾಹದಲ್ಲಿ ಪಾಲ್ಗೊಂಡು ಭಜನಾ ತಂಡದೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದ ಶಾಸಕ ಚೌವ್ಹಾಣ. ಭವಾನಿ ಬಿಜಲಗಾಂವ ದೇವಸ್ಥಾನ ಪುರಾತನ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ದೇವಸ್ಥಾನವಾಗಿದೆ. ಭವಾನಿ ಮಾತೆ ಶಕ್ತಿಶಾಲಿ ದೇವತೆಯಾಗಿದ್ದಾರೆ.
ಕಷ್ಟದಲ್ಲಿರುವ ಭಕ್ತರ ಸಮಸ್ಯೆಗಳೆಲ್ಲ ನಿವಾರಣೆಯಾಗಿ, ಜೀವನ ಸುಂದರವಾಗುತ್ತದೆ ಎಂದು ಶಾಸಕ ಚೌವ್ಹಾಣ ಮಾಹಿತಿ ನೀಡಿದರು. ಪ್ರತಿ ವರ್ಷ ನವರಾತ್ರಿ ಮಹೋತ್ಸವದ ನಿಮಿತ್ತ ಅಖಂಡ ಹರಿನಾಮ ಸಪ್ತಾಹ ನಡೆಸುತ್ತಾ ಬಂದಿರುವುದು ಉತ್ತಮ ಕೆಲಸವೆಂದು ಗ್ರಾಮಸ್ಥರ ಕೆಲಸವನ್ನು ಅಖಂಡ ಹರಿನಾಮ ಸಪ್ತಾಹವು ಯುವಕರಲ್ಲಿ ನಮ್ಮ ದೇಶದ ಕಲೆ, ಪರಂಪರೆಯನ್ನು ತಿಳಿಸಲು ಸಹಕಾರಿಯಾಗುತ್ತದೆ.