ಬೆಂಗಳೂರು: ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಗೆ ವೀಕ್ಷಕರಾಗಿ ಪರಮೇಶ್ವರ್ ನೇಮಕ ವಿಚಾರ ಬಗ್ಗೆ ಮಾತನಾಡಿದ ಅವರು, ಹೌದು ನಂಗೆ ಬಾಂಬೆ ಮತ್ತು ಕೊಂಕಣ್ ಭಾಗ ಕೊಟ್ಟಿದ್ದಾರೆಹಿರಿಯ,ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೊತೆ ನನ್ನನ್ನು ಹಾಕಿದ್ದಾರೆ ರಾಜ್ಯದಿಂದ ಎಂ ಬಿ ಪಾಟೀಲ್ ಕೂಡ ಇದ್ದಾರೆ ಎಂದರು.
ಹಾಗೆ ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿಯವರು ವಾಲ್ಮೀಕಿ ಪ್ರಕರಣ ಬಗ್ಗೆ ಪ್ರಚಾರ ಮಾಡಬಹುದುನಾವು ಸಹ ಅದರ ಬಗ್ಗೆ ಏನು ನಡೆದಿದೆ ಹೇಳ್ತೇವೆಅದು ಅಧಿಕಾರಿಗಳ ಮಟ್ಟದಲ್ಲಿ ಆಯ್ತಾ? ರಾಜಕಾರಣಿಗಳ ಮಟ್ಟದಲ್ಲಿ ಆಯ್ತಾ ಅಂತ ಹೇಳ್ತೇವೆ
ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದ ಪ್ರಕರಣ..ಇದನ್ನೇ ನಾವು ಚುನಾವಣಾ ಪ್ರಚಾರ ವೇಳೆ ಹೇಳ್ತೇವೆ.ದದ್ದಲ್ ಅವರನ್ನುವಿಚಾರಣೆಗೆ ಕರೆದಿದ್ರು, ಆದರೆ ಅವರ ಹೆಸರು ಪ್ರಕರಣದಲ್ಲಿ ಬರಲಿಲ್ಲನಾಗೇಂದ್ರ ಅವರ ವಿಚಾರಣೆಯೂ ಆಗಿದೆ
ರಾಜ್ಯದಲ್ಲಿ ನಿರಂತರ ಮಳೆ ವಿಚಾರ ಇದು ಅನಿರೀಕ್ಷಿತ ವಾಗಿ ಬಂದಿರುವ ಮಳೆ ಯಾವತ್ತಾದರೂ ಇಂಥ ಮಳೆ ನೋಡಿದೀವಾ ನಾವು? ಅದೂ ಅಕ್ಟೋಬರ್ ನಲ್ಲಿ ಈ ಥರ ಮಳೆ ಬಿದ್ದಿದ್ದು ಇಲ್ಲ ಆದರೆ ಮಳೆ ಬರ್ತಿದೆ, ಎದುರಿಸಬೇಕು
ಮಳೆ ಬಂದಾಗ ನೀರನ್ನು ವಾಪಸ್ ಆಕಾಶಕ್ಕೇ ಕಳಿಸೋಕ್ಕೆ ಆಗಲ್ಲ ..ಬಿದ್ದ ಮಳೆ ನೀರು ಭೂಮಿ ಮೇಲೆಯೇ ಹರಿದು ಹೋಗಬೇಕು
ಹರಿಯಾಣದಲ್ಲಿ ಮೋದಿ ಅವರು ಮುಡಾ ಬಗ್ಗೆ ಪ್ರಚಾರ ಮಾಡಿರಬಹುದುಹರಿಯಾಣದಲ್ಲಿ ಎಷ್ಟು ಜನಕ್ಕೆ ಇದು ಗೊತ್ತಿದೆ….?ಅವರು ರಾಜಕೀಯ ಪ್ರಚಾರ ಮಾಡಿರ್ತಾರೆ ಮಹಾರಾಷ್ಟ್ರದಲ್ಲೂ ಪ್ರಚಾರ ಮಾಡಿದರೆ ನಾವು ಸತ್ಯ ಏನಿದೆ ಹೇಳ್ತೀವಿ, ಗೆದ್ದು ಬರ್ತೀವಿ ಎಂದರು.