ಅಕ್ಟೋಬರ್ 17ರಿಂದ ತುಲಾ ಸಂಕ್ರಮಣದ ಪವಿತ್ರ ಶ್ರೀ ಕಾವೇರಿ ತೀರ್ಥೋದ್ಭವ ಜಾತ್ರೆ ಅಂಗವಾಗಿ ನಿನ್ನೆ ಬೆಳಿಗ್ಗೆ 11.33 ರ ಶುಭ ಲಗ್ನದಲ್ಲಿ ಭಾಗಮಂಡಲ ತಲಕಾವೇರಿ ವ್ಯವಸ್ಥಾಪನ ಸಮಿತಿಯ ಆಡಳಿತ ಅಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಶ್ರೀಮತಿ ಐಶ್ವರ್ಯ ರವರು ನಂದಾ ದೀಪ ಬೆಳಗಿಸಿ,
ನಂತರ 11:40ರ ಸಂದರ್ಭದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಪ್ರತಿ ವರ್ಷದ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಕಾರ್ಯನಿರ್ವಣಾಧಿಕಾರಿ ಚಂದ್ರಶೇಖರ್, ತಲಕಾವೇರಿ ತಕ್ಕರಾದ ಮೋಟಯ್ಯ, ಭಾಗಮಂಡಲ ತಕ್ಕರಾದ ಅಪ್ಪಾಜಿ, ಭಗಂಡೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಹರೀಶ್ ಭಟ್, ಸಿಬ್ಬಂದಿ ವರ್ಗದವರು ಹಾಗೂ ಭಕ್ತಾದಿಗಳು ಈ ಸಂದರ್ಭ ಉಪಸ್ಥಿತರಿದ್ದರು.