ಬೆಂಗಳೂರು: ಬಿಜೆಪಿ ನಾಯಕನ ವಿರುದ್ದ ಎಫ್ ಐ ಆರ್. ದಾಖಲಾಗಿದ್ದು ರಾಜ್ಯ ಬಿಜೆಪಿ ಎಸ್ ಟಿ ಘಟಕದ ಉಪಾಧ್ಯಕ್ಷ ಆರ್ ಅನೀಲ್ ಕುಮಾರ್ ವಿರುದ್ದ ದೂರು ದಾಖಲು.
ಹೌದು .. ರಾಜ್ಯ ಬಿಜೆಪಿ ಎಸ್ ಟಿ ಘಟಕದ ಉಪಾಧ್ಯಕ್ಷ ಆರ್ ಅನೀಲ್ ಕುಮಾರ್ 2023ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು ಆ ನಂತರ ಗಣಿಗಾರಿಕೆ ಕಂಪನಿಯಲ್ಲಿ ಪಾಲುದಾರಿಕೆ ಕೊಡಿಸುವುದಾಗಿ ನಂಬಿಸಿ ಉದ್ಯಮಿಗೆ ವಂಚನೆ ಆರೋಪ ಮಾಡಿರುವುದು ಬೆಳಕಿಗೆ ಬಂದಿದೆ.
ಉದ್ಯಮಿ ಜಿ. ಶ್ರೀನಿವಾಸ ಮಿತ್ರ ಬಳಿ 6.40 ಕೋಟಿ ಹಣ ಪಡೆದು ವಂಚನೆ ಮಾಡಿದ್ದು ಹಾಗೆ ಬಿಜೆಪಿ ನಾಯಕ ಸೇರಿದಂತೆ ಐವರ ವಿರುದ್ಧ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲು. ಅನಿಲ್ ಕುಮಾರ್, ಉದ್ಯಮಿಗಳಾದ ಶ್ರೀನಿವಾಸರೆಡ್ಡಿ, ಡಿ.ಆರ್. ಇಂದಿರಾ, ಬಸವರಾಜು, ಶಶಿ ಎಂಬುವವರ ವಿರುದ್ದ ದೂರು ದಾಖಲಾಗಿದೆ.
ಕ್ರಿಮಿನಲ್ ಪಿತೂರಿ, ವಂಚನೆ ಹಾಗೂ ನಂಬಿಕೆ ದ್ರೋಹ ಆರೋಪದಡಿ ಎಫ್ ಐಆರ್ ದಾಖಲಿಸಿದ ಸಿಸಿಬಿ 2023ರ ಮಾರ್ಚ್ನಲ್ಲಿ ಶ್ರೀನಿವಾಸ್ ರವರಿಗೆ ಬಸವರಾಜು ಹಾಗೂ ಶಶಿ ಮುಖಾಂತರ ಅನಿಲ್ಕುಮಾರ್ ಪರಿಚಯ ಹೊಳಲ್ಕೆರೆ ತಾಲೂಕಿನ 210 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ ವಿಟು ಎ ಐರನ್ ಮೈನಿಂಗ್ ಲಿಮಿಟೆಡ್ ಗಣಿಗಾರಿಕೆ ಕಂಪನಿಯಲ್ಲಿ10 ಕೋಟಿ ರೂ ಹೂಡಿಕೆ ಮಾಡಿದ್ರೆ 25% ಮಾಲಿಕತ್ವ ಲಾಭ ಕೊಡೋದಾಗಿ ನಂಬಿಸಿದ್ದಾರೆ ಅನಿಲ್ ಕುಮಾರ್ ನಂಬಿ ಹೆಚ್ಚಿನ ಲಾಭಾಂಶ ಆಸೆಯಿಂದ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದ ಉದ್ಯಮಿ.
ಅಲ್ಲದೆ 60ಲಕ್ಷ ನಗದು ರೂಪದಲ್ಲೂ ಹಣ ನೀಡಿದ್ದ ಉದ್ಯಮಿ ನಂತರ ಮೈನಿಂಗ್ ಲೈಸೆನ್ಸ್ ನಂಬರ್ ನೀಡಿದ್ದ ವಂಚಕರು. ಆದ್ರೆ ಆ ಸ್ಥಳದಲ್ಲಿ ಗಣಿಗಾರಿಕೆ ನಿಂತು ವರ್ಷಗಳೇ ಕಳೆದಿರೋದು ಉದ್ಯಮಿಗೆ ಗೊತ್ತಾಗಿದೆ ಇನ್ನು ತಾನು ಹೂಡಿಕೆ ಮಾಡಿದ ಹಣ ವಾಪಸ್ ನೀಡುವಂತೆ ಅನಿಲ್ಕುಮಾರ್ಗೆ ಕೇಳಿದ್ದ ಉದ್ಯಮಿ ಆದ್ರೆ ಅನೀಲ್ ಕುಮಾರ್ ರಾಜಕೀಯ ಪ್ರಭಾವದಿಂದ ಸುಳ್ಳು ಕೇಸ್ ಹಾಕಿಸೋದಾಗಿ ಬೆದರಿಕೆ ಆರೋಪ.
ಸದ್ಯ ಸಿಸಿಬಿ ಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಸುತ್ತಿರುವ ಪೊಲೀಸರು.