ಬೆಂಗಳೂರು: ಇವತ್ತು ಕಾವೇರಿ ಮೂರನೇ ಹಂತದ ಯೋಜನೆಗೆ ಚಾಲನೆ ನೀಡಲು ಹೋಗುತ್ತಿದ್ದೇವೆ ಹಾಗೆ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳುರು ಮಳೆ ಅವಾಂತರ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಟ್ರಾಫಿಕ್ ಜಾಮ್ ಆಗುತ್ತದೆ ನಿನ್ನೆ ಒಂದು ರೌಂಡ್ ಬೆಂಗಳೂರು ಸುತ್ತಿದ್ದೇನೆ ಇಂದು ಸಂಜೆ ಮತ್ತೆ ರೌಂಡ್ ಹೋಗುತ್ತೇನೆ
ಪೊಲೀಸ್ ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಹೋಗುತ್ತೇನೆ..ವಿರೋಧ ಪಕ್ಷದವರು ಸುಮ್ಮನೆ ಟ್ವೀಟ್ಮಾ ಡುತ್ತಿದ್ದಾರೆ ನಮ್ಮ ರಾಜ್ಯದ ಮರ್ಯಾದೆ ಅವರೆ ಕಳೆಯುತ್ತಿದ್ದಾರೆ
ಪ್ರಕೃತಿಗೆ ಯಾರಾದರೂ ಬುದ್ದಿ ಹೇಳಲು ಆಗಲ್ಲ ಮಳೆ ಬರಬೇಕು ಎಷ್ಟೇ ತೊಂದರೆ ಆದರೂ ನಿಭಾಯಿಸುವ ಶಕ್ತಿ ನಮಗಿದೆ