ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಮಳೆ ಅವಾಂತರ ವಿಚಾರ ಬಗ್ಗೆ ಗೃಹ ಸಚಿವ ಪರಮೇಶ್ವರ್ ಬೇಜವಬ್ದಾರಿ ಹೇಳಿಕೆ ನೀಡಿದ್ದಾರೆ.ಮಳೆ ಬಂದಾಗ ನೀರನ್ನು ವಾಪಸ್ ಆಕಾಶಕ್ಕೆ ಕಳಿಸೋಕೆ ಆಗಲ್ಲ ಭೂಮಿ ಮೇಲೆ ಹರಿದು ಹೋಗಬೇಕು ಎಂದಿದ್ದಾರೆ.
ಹೌದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ಮಳೆ ಅನಿರೀಕ್ಷಿತ ನಮಗೆ ಆಶ್ಚರ್ಯ ಆಗುತ್ತೆ ಅಕ್ಟೋಬರ್ ತಿಂಗಳಲ್ಲಿ ಇಷ್ಟು ದೊಡ್ಡ ಮಳೆ ಬರ್ತಾ ಇದೆ ಅಂದಾಗ ಎಂಥಾ ಸಿಟಿ ಇದ್ರೂ ಕೂಡ ಅಸ್ತವ್ಯಸ್ತ ಆಗ್ತಿತ್ತು ಅಂದಿದ್ದಾರೆ.
ಹಾಗೆ ನ್ಯೂಯಾರ್ಕ್ ನಲ್ಲಿ ಆಗಲ್ವಾ..? ಲಂಡನ್ ನಲ್ಲಿ ಆಗತ್ತೆ ಯಾವುದೇ ಸಿಟಿ ಇದ್ರೂ ಅಸ್ತವ್ಯಸ್ತ ಆಗತ್ತೆ ಇದು ಆಗ್ತಾ ಇರುತ್ತೆ ಅದನ್ನ ಮ್ಯಾನೇಜ್ ಮಾಡ್ತಾ ಹೋಗಬೇಕು ಮಳೆ ಬಂದಾಗ ನೀರನ್ನು ವಾಪಸ್ ಆಕಾಶಕ್ಕೆ ಕಳಿಸೋಕೆ ಆಗಲ್ಲ ಭೂಮಿ ಮೇಲೆ ಹರಿದು ಹೋಗಬೇಕು ಎಂದು ಪರಮೇಶ್ವರ್ ಬೇಜವಾಬ್ದಾರಿಯಾಗಿ ಹೇಳಿಕೆ ಕೊಟ್ಟಿದ್ದಾರೆ.