ಬಿಸಿಲೂರು ಕಲಬುರಗಿಯಲ್ಲಿಯೂ ವರುಣನ ಆರ್ಭಟ ಶುರುವಾಗಿದೆ.. ಬೆಳಿಗ್ಗೆಯಿಂದಲೇ ಮಳೆ ಆರಂಭವಾಗಿದ್ದು ನಿರಂತರ ಮಳೆಯಿಂದಾಗಿ ಜನ ಮನೆಯಲ್ಲಿಯೇ ಕೂರುವಂತಾಗಿದೆ..
ಜನ ಜೀವನ ಅಸ್ತವ್ಯಸ್ತವಾಗಿದ್ದು ಸಂಜೆಯವರೆಗೂ ಮಳೆ ರಗಳೆ ಇರಲಿದೆ ಅಂತ ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದಾಗಿ ತಮಿಳುನಾಡು, ಆಂಧ್ರದ ದಕ್ಷಿಣ ಭಾಗ ಹಾಗೂ ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದೆ.