ಹುಬ್ಬಳ್ಳಿ;ಇಂದು ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧಗಳು, ಕೊಲೆ- ದರೋಡೆ ಗಳಂತಹ ಪ್ರಕರಣಗಳು ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯಗಳು ಮುಂತಾದ ಅನೇಕ ಕೃತ್ಯಗಳು ಮಾನವ ಜನಾಂಗಕ್ಕೆ ಮಾರಕವಾಗಿದೆ.
ಇದರ ವಿರುದ್ಧ ಹೋರಾಟ ಅನಿವಾರ್ಯ ಆಗಿದೆ.ಇಂದು ದೂರದೃಷ್ಟಿಕೋನವುಳ್ಳ ನಾಗರಿಕರ ನಿರ್ಮಾಣ ಶಿಕ್ಷಣದ ಗುರಿಯಾಗಬೇಕು ಎಂದು ವಿಜ್ಞಾನ ಸಂವಹನಕಾರಸಂಜೀವಕುಮಾರ ಭೂಶೆಟ್ಟಿ ನುಡಿದರು.
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಎಲ್ಲ ಬೆಳವಣಿಗೆಗಳನ್ನಅವಲೋಕಿಸಿದಾಗ ನಮ್ಮೆಲ್ಲರ ಮನದಲ್ಲಿ ನಾವೆಲ್ಲಾ ‘ನಾಗರಿಕರೇ?” ಎಂಬ ಪ್ರಶ್ನೆ ಮೂಡುತ್ತದೆ. ಇತ್ತೀಚೆಗೆ ಚಿಕ್ಕಚಿಕ್ಕ ಮಕ್ಕಳೂ ಕೂಡ ಮಾದಕ ವಸ್ತುಗಳ ಸೇವನೆಯ ದಾಸರಾಗುತ್ತಿರುವುದು ವಿಷಾದನೀಯ, ಅವರು ಇಂದು ಈ ಜಗ್ತಿತಿಗೆ ಸಾಕಷ್ಟು ತೆರೆದುಕೊಳ್ಳುತ್ತಿದ್ದು ನಾವೂ ಊಹಿಸಲು ಸಾಧ್ಯವಾಗದಷ್ಟು ಮಟ್ಟಿಗೆ ಅವರಲ್ಲಿ ವ್ಯಸನಗಳು ತುಂಬಿಕೊಳ್ಳುತ್ತಿವೆ.
ಮಕ್ಕಳ ಮನಸ್ಸು ಇಂದು ತುಂಬಾ ಚಂಚಲ ಮತ್ತು ಆನಮತೋಲಿತಗೊಂಡಿದೆ ಸಾಕಷ್ಟು ಬಾರಿ ಅನೇಶ ಶುಲ್ಲಕ ಕಾರಣಗಳಿಗೂ ಆತ್ಮಹತ್ಯೆಗಳಂತಹ ಅಥವಾ ಸ್ವಂತ ತಂದೆ-ತಾಯಿಗಳನ್ನೇ ಶಿಕ್ಷಿಸುವ ಮಟ್ಟಕ್ಕೆ ಮಕ್ಕಳ ಮನಸ್ಸು ದುರ್ಬಲಗೊಂಡಿದೆ. ಮಕ್ಕಳಲ್ಲಿ ಬೇರೂರುತ್ತಿರುವ ಮಾನಸಿಕ ತಲ್ಲಣ ಅಶಾಭಂಗ, ನಿರಾಶೆ, ಆತ್ಮವಿಶ್ವಾಸದ ಕೊರತೆಗಳನ್ನು ನೀಗಿಸಿ. ಶೈಕ್ಷಣಿಕವಾಗಿ ಪ್ರಗತಿ ಕಾಣುವಂತೆ ಮಾಡಿ, ಸಾಮಾಜಿಕ ಬದ್ಧತೆಯನ್ನು ಬೆಳೆಸುವ ಮತ್ತು ವರಸ್ಪರ ಸೌಹಾರ್ಧಯುತ ವರ್ತನೆ ರೂಢಿಸುವ ನಿಟ್ಟಿನಲ್ಲಿ ಭಾವೀ ಶಿಕ್ಷಕರಾಗುತ್ತಿರುವ ನಿಮ್ಮ ಮೇಲೆ ಗುರುತರವಾದ ಜವಾಬ್ದಾರಿಯಿದೆ ಮತ್ತು ಅದಕ್ಕಾಗಿ ದೂರದೃಷ್ಟಿಕೋನದ ನಾಗರಿಕರ ನಿರ್ಮಾಣ ಮಾಡುವಂಥ ಗುರಿ ಶಿಕ್ಷಣದ್ದಾಗಬೇಕಿದೆ ಎಂದರು..
ಅಧ್ಯಕ್ಷತೆವಹಿಸಿದ್ದ ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಶಾಂತಣ್ಣ ಕಡಿವಾಳ ಮಾತನಾಡಿ ‘ಶಿಕ್ಷಣ ಒಂದು ಶಕ್ತಿ ಇದರಿಂದ ಜನರಲ್ಲಿ ಅಜ್ಞಾನ ದೂರವಾಗಿ ಬದುಕಿಗೊಂದು ದಾರಿ ನಿರ್ಮಾಣವಾಗುತ್ತದೆ. ಸುಶಿಕ್ಷಿತ ಸಮಾಜ ರೂಪಿಸುವ ಶಕ್ತಿ ನಿಮ್ಮದಾಗಲಿ” ಎಂದು ನುಡಿದರು.
ಸಮಾಜ ಸೇವಕರಾದ ವಿ.ಜಿ.ಪಾಟೀಲ, ಉಪಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ದಂಡಿನ, ಡಾ.ಎಚ್.ವಿ.ಬೆಳಗಲಿ, ಡಾ.ಆಶಾ ಪಾಟೀಲ, ಡಾ.ಭಟ್. ಡಾ.ರಾಜಕುಮಾರ ಪಾಟೀಲ, ಡಾ.ಬಸನಾಳ ಮುಂತಾದವರು ಉಪಸ್ಥಿತರಿದ್ದರು.
ಪ್ರಾಚಾರ್ಯರಾದ ಡಾ.ನೂರಜಹಾನ್ ಶೇಕ್ ಸ್ವಾಗತಿಸಿದರು. ಸಾಂಸ್ಕೃತಿಕ ವಿಭಾಗದ ಮಾರ್ಗದರ್ಶಕರಾದ ಪ್ರೊ.ಪಂಪಾಪತಿ ಹೆಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಳ್ಳಿಗೇರಿ ಪರಿಚಯಿಸಿದರು. ಡಾ.ಜಯಶ್ರೀ ಹಿರೇಮಠ ನಿರೂಪಿಸಿದರು. ಕು.ಮಹಾಂತೇಶ ವಂದಿಸಿದರು.