ಗದಗ: ಭೀಕರ ಬಿರುಗಾಳಿ ಸಹಿತ ಭಾರೀ ಮಳೆಗೆ ನಾಟಕದ ಟೆಂಟ್ ಧರೆಗುರುಳಿ ಅಪಾರ ಪ್ರಮಾಣದ ಹಾನಿಯಾಗಿದೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದ ಜಾಗದಲ್ಲಿ ಚಿತ್ತರಗಿಯ ಶ್ರೀಕುಮಾರ ವಿಜಯ ನಾಟಕ ಸಂಘದಿಂದ ಬೃಹತ್ ಗಾತ್ರದ ರಂಗಮಂದಿರ ನಿರ್ಮಾಣ ಮಾಡಲಾಗಿತ್ತು.
ಬಿರುಗಾಳಿ ಸಹಿತ ಮಳೆ ಬಂದಿದ್ರಿಂದಾಗಿ ಇಡೀ ರಂಗಮಂದಿರ ಧರೆಗೆ ಉರುಳಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದ್ರೆ ಕಲೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕಲಾವಿದರ ಬದುಕು ಬೀದಿಗೆ ಬಂದಂತಾಗಿದೆ. ವೃತ್ತಿ ರಂಗಭೂಮಿ ಮರೀಚಿಕೆಯಾಗುತ್ತಿರೋ ಕಾಲದಲ್ಲಿ ನಾಟಕವಾಡಿ ಜೀವನ ನಡೆಸೋ ಕಲಾವಿದರಿಗೆ ವರುಣನ ಆರ್ಭಟ ಭರಸಿಡಿಲು ಬಡಿದಂತಾಗಿದೆ.
Alcohol: ವಿಸ್ಕಿ ಮತ್ತು ಬಿಯರ್ ಒಟ್ಟಿಗೆ ಸೇರಿಸಿ ಕುಡಿದ್ರೆ ಏನಾಗುತ್ತದೆ ಗೊತ್ತಾ..? ಈ ಸ್ಟೋರಿ ನೋಡಿ
ನಾಟಕದ ಬ್ಯಾಗ್ರೌಂಡ್ ಸೀನರಿ, ಸೌಂಡ್ ಸಿಸ್ಟಮ್, ಲೈಟಿಂಗ್, ಕುರ್ಚಿ ಸೇರಿದಂತೆ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ರಂಗಭೂಮಿ ವಸ್ತುಗಳು ಹಾನಿಯಾಗಿವೆ. ಜೊತೆಗೆ ಒಂದು ಕಾರ್, ಎರಡು ಬೈಕ್ ಗಳು ಜಖಂ ಗೊಂಡಿವೆ. ಮುಂಡರಗಿ ಜನತೆ ಸಹಾಯಹಸ್ತದ ಭರವಸೆ ನೀಡಿದ್ದು ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ, ಸರ್ಕಾರ ಶ್ರೀ ಕುಮಾರ ವಿಜಯ ನಾಟಕ ಸಂಘದ ನೆರವಿಗೆ ಧಾವಿಸಿ ಕಳೆದು ಹೋಗುತ್ತಿರುವ ನಾಟಕ ಕಲೆಗೆ ಪುನಶ್ಚೇತನ ಕಾರ್ಯ ಮಾಡಬೇಕಿದೆ.