ಹುಬ್ಬಳ್ಳಿ: ರಾಜ್ಯ ಸರ್ಕಾರ ಮಾಡಿರುವ ಜಾತಿ ಗಣತಿ ಅಲ್ಲ ಅದೊಂದು ಸಾಮಾಜಿಕ ಸಮೀಕ್ಷೆ ಆಗಿದ್ದು, ಸರ್ಕಾರ ಏನಾದರೂ ಜಾತಿ ಗಣತಿಯನ್ನು ಜಾರಿ ಮಾಡಲು ಹೊರಟರೇ ಅದಕ್ಕೆ ನಾವು ಒಪ್ಪಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಜಾತಿಗಣತಿ ಮಾಡಲಿಕ್ಕೆ ನಮ್ಮ ವಿರೋಧವಿಲ್ಲ. ಜಾತಿಗಣತಿ ಎಲ್ಲೋ ಒಂದು ಜಾಗದಲ್ಲಿ ಕುಳಿತು ಮಾಡಿದ್ರೆ ಅದು ಸಮೀಕ್ಷೆ ಆಗುತ್ತೆ. ಐಬಿಯಲ್ಲಿ ಕುಳಿತುಕೊಂಡು ಮಾಡಿದ್ರೆ ಸಮೀಕ್ಷೆ ಆಗುತ್ತದೆ, ಜಾತಿಗಣತಿ ಆಗೋಲ್ಲ. ಮನೆ ಮನೆಗೆ ತೆರಳಿ ಸರ್ವೇ ಮಾಡಬೇಕು. ಮತ್ತೊಮ್ಮೆ ಜಾತಿಗಣತಿ ಮಾಡಬೇಕೆಂಬುದು ನಮ್ಮ ಆಗ್ರಹವಿದೆ. ಈಗಿನ ಜಾತಿಗಣತಿ ವರದಿಯನ್ನ ನಾವು ಒಪ್ಪಿಕೊಳ್ಳುವುದಿಲ್ಲ ಎಂದರು.
WhatsApp Call Record: ವಾಟ್ಸ್ʼಆ್ಯಪ್ ಕಾಲ್ ರೆಕಾರ್ಡ್ ಮಾಡೋದು ಹೇಗೆ ಗೊತ್ತಾ.? ಇಲ್ಲಿದೆ ಟ್ರಿಕ್
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಅವರು ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪನೆಗೆ ತಮ್ಮ ಸಲಹೆ ಸೂಚನೆಗಳನ್ನು ಕೇಳಿದ್ದು ನಾನು ಮುಕ್ತವಾಗಿ ಕೊಟ್ಟಿದ್ದೇನೆ. ರಾಯಣ್ಣ ಮತ್ತು ಚನ್ನಮ್ಮ ನಮ್ಮ ಸಾಂಸ್ಕ್ರತಿಕ ನಾಯಕರು. ಅವರ ಹೆಸರಿನಲ್ಲಿ ಹಿಂದುಳಿದ ವರ್ಗದ ಏಳಿಗೆ ಹಾಗೂ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೊಸ ಸಂಘಟನೆ ಮಾಡಲು ಕೆ ಎಸ್ ಈಶ್ವರಪ್ಪಗೆ ಹೇಳಿದ್ದು ನಿಜ. ರಾಯಣ್ಣ, ಚೆನ್ನಮ್ಮ ಬ್ರಿಗೆಡ್ ಕುರಿತಂತೆ ಬಾಗಲಕೋಟೆಯಲ್ಲಿ ನಡೆಯುವ ಸಭೆಗೆ ನನಗೂ ಆಹ್ವಾನ ಇದೆ. ನಾನೂ ಈಗ ಮೀಸಲಾತಿ ಹೋರಾಟದಲ್ಲಿ ಒತ್ತಡದಲ್ಲಿ ಇದೇನಿ. ಫ್ರೀ ಇದ್ದರೇ ಈ ಸಭೆಗೆ ನಾನು ಹೋಗ್ತೆನಿ ಎಂದರು.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬೇಡಿಕೆ, ಹೋರಾಟ ಹಲವು ವರ್ಷಗಳಿಂದ ಮುಂದುವರಿದಿದ್ದು ಮೀಸಲಾತಿ ಸಿಗುವ ಸಾಧ್ಯತೆ ಇದ್ದು ಈ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹಕಚೇರಿಯಲ್ಲಿ ಅ. 18ರಂದು ಸಭೆ ಕರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಬೇಡಿಕೆಗೆ ಸಮರ್ಪಕವಾಗಿ ಸ್ಪಂದಿಸಿರಲಿಲ್ಲ.
ಅವರು 2 ಬಾರಿ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಬೇಡಿಕೆ ಈಡೇರಿಕೆಗಾಗಿ ಸಮಾಜದ ವಕೀಲರೂ ಪ್ರತಿಭಟನೆ ಮಾಡಿದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 18ರಂದು ಸಭೆ ಕರೆದಿದ್ದಾರೆ. ನಾನು ಮತ್ತು ಸಮಾಜದ 11 ವಕೀಲರ ನಿಯೋಗ ಸಿಎಂ ಭೇಟಿಗೆ ತೆರಳಲಿದ್ದೇವೆ. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂಬ ಆಶಾವಾದ ಇದೆ ಎಂದರು.
ಲಿಂಗಾಯತ ಸಮಾಜದ ಎಲ್ಲ ಶಾಸಕರು ಸಭೆಗೆ ಬರಬೇಕು ಎಂದು ಸ್ವಾಮೀಜಿ ಆಹ್ವಾನಿಸಿದರು. ಒಂದು ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯಾ ತಮ್ಮ ಬೇಡಿಕೆ ಈಡೇರಿಸಲು ಸರಿಯಾಗಿ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದರೇ ಅನಿವಾರ್ಯವಾಗಿ ಮುಂದಿನ ಹೋರಾಟದ ರೂಪ ರೇಷಗಳನ್ನ ಮಾಡಬೇಕಾಗುತ್ತದೆ ಎಂದರು.