ಬೀದರ್: ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಆಪ್ತ ಸಂಜುಕುಮಾರ ಸುಗರೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ಕೇಳಿಬಂದಿದೆ. ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಪೊಲೀಸರು ನಡೆಸುತ್ತಿದ್ದಾರೆ. ಭಾನುವಾರ ಬೆಳಗ್ಗಿನ ಜಾವ 4ರ ಸುಮಾರಿಗೆ ಬಸವಕಲ್ಯಾಣದ ಜೈಶಂಕರ ಕಾಲೋನಿಯ ತಮ್ಮ ನಿವಾಸದಿಂದ ತೆರಳಿದ ಇವರ ಸುಳಿವು ಇನ್ನೂ ಸಿಕ್ಕಿಲ್ಲ. ಇದು ಒಂದೆಡೆ ಕುಟುಂಬದವರಲ್ಲಿ ಆತಂಕ ಮೂಡಿಸಿದರೆ.? ಇನ್ನೊಂದೆಡೆ ಕ್ಷೇತ್ರದ ರಾಜಕೀಯ ವಲಯದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ.
ಮನೆಯಿಂದ ಭಾನುವಾರ ಬೆಳಗ್ಗಿನ ಜಾವ ಸುಗರೆ ಅವರು ಕಾಲ್ನಡಿಗೆಯಲ್ಲೇ ಹೊರ ಹೋಗಿದ್ದಾರೆ. ತಮ್ಮ ಎರಡು ಫೋನ್ಗಳು ಮನೆಯಲ್ಲಿ ಇಟ್ಟಿದ್ದಾರೆ. ಇವರು ಮನೆಯಿಂದ ಒಬ್ಬರೇ ಹೋಗುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.. ಎಲ್ಲಿಗೆ ಹೋದರು? ಮನೆಯವರಿಗೆ ಏನೂ ಹೇಳದೆ, ಕೇಳದೆ ಏಕೆ ಹೋದರು? ಸದ್ಯ ಎಲ್ಲಿದ್ದಾರೆ? ಹೇಗಿದ್ದಾರೆ ಎಂಬುದು ಗೊತ್ತಾಗಿಲ್ಲ. ಈ ಸಂಬಂಧ ಸುಗರೆ ಪುತ್ರ ಬಸವಕಲ್ಯಾಣ ನಗರ ಠಾಣೆಗೆ ದೂರು ನೀಡಿದ್ದು, ತಂದೆಯ ಪತ್ತೆಗೆ ಮೊರೆಯಿಟ್ಟಿದ್ದಾರೆ.. ಸುಗರೆ ನಿಗೂಢ ನಾಪತ್ತೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ…
ಭಾರತೀಯ ಆಹಾರ ನಿಗಮದಲ್ಲಿದೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹ 71,000 ಸಂಬಳ – ಇಂದೇ ಅರ್ಜಿ ಸಲ್ಲಿಸಿ
ಮನೆಯಿಂದ ಹೊರಡುವ ಮುನ್ನ ಸುಗರೆ ಅವರು ಚೀಟಿ ಬರೆದಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರ ಪುತ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ಈ ವಿಷಯ ಉಲ್ಲೇಖಿಸಿಲ್ಲ. ಯಾವುದೇ ಚೀಟಿ ಸಿಕ್ಕಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಗರೆ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.