ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಲಾಕ್ ಆಗಿರೋ ಡಿ ಗ್ಯಾಂಗ್ಗೆ ಬೆಂಗಳೂರಿನ ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ರಾಜ್ಯಾತಿಥ ನೀಡಿದ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆ ಆಗಿತ್ತು… ರಾಜ್ಯಾತಿಥ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಜೈಲಾಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿತ್ತು.. ಇದೀಗ ಆ ಪ್ರಕರಣ ಮಾಸುವ ಮುನ್ನವೆ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ಬಿಂದಾಸ್ ಲೈಫ್ನ ವಿಡಿಯೋ ವೈರಲ್ ಆಗಿವೆ.. ಅಷ್ಟಕ್ಕೂ ಈ ವಿಡಿಯೋಗಳನ್ನ ನೋಡಿದ್ರೆ ಇದು ಜೈಲೋ ಅಥವಾ ಗಾಂಜಾ ಅಡ್ಡೆಯೋ ಅನ್ನೊ ಪ್ರಶ್ನೆ ಕಾಡುತ್ತೆ..
ಎಸ್.. ಬಿಂದಾಸ್ ಆಗಿ ಗಾಂಜಾ ಮತ್ತು ಎಣ್ಣೆ ಹೊಡೆಯುತ್ತಿರೋ ಕೈದಿಗಳು.. ಮತ್ತೊಂದೆಡೆ ಜೈಲಿನಿಂದಲೇ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಎಂಜಾಯ್ ಮಾಡ್ತಿರೋ ಕೆಲ ಕೈದಿಗಳು.. ಅಷ್ಟಕ್ಕೂ ಈ ದೃಶ್ಯಗಳು ನೋಡಿದ್ರೆ ಯಾವುದೋ ಗಾಂಜಾ ಅಡ್ಡೆ ಇರಬೇಕು ಅಂತಾ ಅನಿಸದೇ ಇರದು.. ಖಂಡಿತ ನಿಮ್ಮ ಊಹೆ ತಪ್ಪು.. ಅಷ್ಟಕ್ಕೂ ಈ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ.. ಹೌದು.. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಹೈ ಫೈ ಲೈಫ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ..
ಭಾರತೀಯ ಆಹಾರ ನಿಗಮದಲ್ಲಿದೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹ 71,000 ಸಂಬಳ – ಇಂದೇ ಅರ್ಜಿ ಸಲ್ಲಿಸಿ
ವಿವಿಧ ಪ್ರಕರಣಗಳಲ್ಲಿ ಶಿವಮೊಗ್ಗ ಮೂಲದ ಮೂವರು ಕೈದಿಗಳಾದ ವಿಶಾಲ್, ಸಾಗರ್, ಸೋನು ಎಂಬುವರು ಸಧ್ಯ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿದ್ದು, ಮೂವರು ಸೇರಿಕೊಂಡು ಎಣ್ಣೆ ಹೊಡೆಯುತ್ತಾ, ಗಾಂಜಾ ಸೇದುತ್ತಾ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಮಸ್ತ್ ಮಜಾ ಮಾಡೋ ವಿಡಿಯೋ ವೈರಲ್ ಆಗಿವೆ.. ಇನ್ನೂ ಈ ಮೂವರು ಸ್ಮಾರ್ಟ್ಫೋನ್ನಿಂದ ವಿಡಿಯೋ ಕಾಲ್ ಮಾಡಿ ತಾವೇ ವೈರಲ್ ಮಾಡಿದ್ದಾರೆ..
ಇನ್ನೂ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ದುಡ್ಡು ಕೊಟ್ಟರೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗ್ತಾವೆ ಅನ್ನೊದಕ್ಕೆ ಇದೊಂದೆ ಉದಾಹರಣೆ ಅಲ್ಲ.. ಈ ಹಿಂದೆ ಕೂಡ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಕೈದಿಗಳು ರಾಜಾರೋಷವಾಗಿ ಗಾಂಜಾ ಸೇದೋದು, ಎಣ್ಣೆ ಹೊಡೆಯೋ ಪ್ರಕರಣಗಳು ಬೆಳಕಿಗೆ ಬಂದಿದ್ದವು.. ಮುಖ್ಯವಾಗಿ ನಟ ದರ್ಶನ್ ಮ್ಯಾನೇಜರ್ ನಾಗರಾಜ್ ಕೂಡ ಕಲಬುರಗಿ ಜೈಲಿನಲ್ಲಿದ್ದು, ಆತನಿಗೂ ಹೈಫೈ ಸೌಲಭ್ಯಗಳನ್ನ ನೀಡಲಾಗ್ತಿದೆಯಾ ಅನ್ನೊ ದಟ್ಟ ಅನುಮಾನ ಕಾಡಲಾರಂಭಿಸಿದೆ.. ಕಳೆದ ನಾಲ್ಕೈದು ದಿನಗಳಿಂದ ಕಲಬುರಗಿ ಜೈಲಿನ ಬಿಂದಾಸ್ ಲೈಫ್ನ ವಿಡಿಯೋ ವೈರಲ್ ಆಗ್ತಿದೆ.
ಈಗಾಗಲೇ ಪರಪ್ಪನ ಅಗ್ರಹಾರ ಜೈಲಲ್ಲಿ ನಟ ದರ್ಶನ್ಗೆ ನೀಡಿದ ರಾಜಾತಿಥ್ಯದ ಬಗ್ಗೆ ಸರ್ಕಾರಕ್ಕೆ ಮುಜುಗರ ಆಗಿದೆ ಈ ನಡುವೆ ಮತ್ತೊಂದು ಜೈಲ್ ಕಥೆ ಹೊರಬಿದ್ದಿದೆ… ಇನ್ನೂ ಈ ವಿಡಿಯೋಗಳ ಬಗ್ಗೆ ಕಲಬುರಗಿ ಜೈಲಿನ ಅಧಿಕಾರಿಗಳು ಉತ್ತರ ಕೊಡದೇ ನುಣುಚಿಕೊಳ್ತಿದ್ದಾರೆ, ಈ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸುತ್ತೇವೆ ಅನ್ನೋ ಮಾತು ಹರಿದಾಡ್ತಿದೆ.. ಅದೇನೆ ಇರಲಿ ನಟ ದರ್ಶನ್ & ಗ್ಯಾಂಗ್ಗೆ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ರಾಜ್ಯಾತಿಥ ನೀಡಿದ ಪ್ರಕರಣ ಮಾಸುವ ಮುನ್ನ ಕಲಬುರಗಿ ಸೆಂಟ್ರಲ್ ಜೈಲಿನ ಕರ್ಮಕಾಂಡದ ವಿಡಿಯೋ ವೈರಲ್ ಆಗಿದ್ದು, ಸರ್ಕಾರಕ್ಕೆ ತೀವ್ರ ಮುಜುಗರ ತಂದಿದ್ದು ಮಾತ್ರ ಸುಳ್ಳಲ್ಲ..