ಬೆಂಗಳೂರು: ಮೂಡಾ ಪ್ರಕರಣದಿಂದಲೇ ಬೇಸತ್ತಿರುವ ಸಿಎಂ ಸಿದ್ದರಾಮಯ್ಯಗೆ ಈಗ ಮತ್ತೊಂದು ತಲೆನೋವು ತಂದಿಟ್ಟಿದೆ. ಅದರ ಮದ್ಯೆ ಈಗ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರಿಗೆ ಮತ್ತೊಂದು ದೂರು ದಾಖಲಾಗಿದ್ದು ಅರ್ಕಾವತಿ ಲೇಔಟ್ ನಿವೇಶನದಾರರಿಂದ ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಅರ್ಕಾವತಿ ಲೇಔಟ್ ನಲ್ಲಿ ಸೈಟು ಹಂಚಿಕೆಯಾಗಿದ್ದ ಶಿವಲಿಂಗಪ್ಪ, ವೆಂಕಟಕೃಷ್ಣಪ್ಪ, ರಾಮಚಂದ್ರಯ್ಯ ರಾಜಶೇಖರ್ ಎಂಬುವವರಿಂದ ದೂರು ನೀಡಲಾಗಿದ್ದು ಅಧಿಕಾರ ದುರ್ಬಳಕೆ ಮಾಡಿದ್ದಾರೆಂದು ಸಿಎಂ ಸಿದ್ದರಾಮಯ್ಯ, ಬಿಡಿಎ ಆಯುಕ್ತರು ಹಾಗೂ ಬಿಡಿಎ ಅಧಿಕಾರಿಗಳ ವಿರುದ್ದ ದೂರು ನೀಡಲಾಗಿದೆ.
ಬೆಂಗಳೂರಲ್ಲಿ ಅ.16ರಿಂದ ಭಾರತ-ನ್ಯೂಜಿಲ್ಯಾಂಡ್ ನಡುವೆ ಟೆಸ್ಟ್: ಜನರ ಅನುಕೂಲಕ್ಕಾಗಿ ಸಂಚಾರ ಮಾರ್ಗ ಬದಲಾವಣೆ
ಅರ್ಕಾವತಿ ಲೇಔಟ್ ನಲ್ಲಿ ಹಂಚಿಕೆಯಾಗಿದ್ದ ನಿವೇಶನ ಭೂಗಳ್ಳರ ಪಾಲಾಗ್ತಿದೆಅಧಿಕಾರ ದುರ್ಬಳಕೆಯಿಂದ ನಿವೇಶನದಾರರಿಗೆ ತೊಂದರೆಯಾಗ್ತಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಏನಿದು ಅರ್ಕಾವತಿ ಲೇಔಟ್ ವಿವಾದ…!?
ಥಣಿಸಂದ್ರ ಸಂಪಿಗೆಹಳ್ಳಿ ಜಕ್ಕೂರು ಕೆ.ನಾರಾಯಣಪುರ ಸೇರಿ 16 ಹಳ್ಳಿಗಳನ್ನ ಸೇರಿ ಅರ್ಕಾವತಿ ಲೇಔಟ್ ನಿರ್ಮಾಣ ಸುಮಾರು 800 ಎಕರೆ ಪ್ರದೇಶದಲ್ಲಿ ಬಿಡಿಎ ಯಿಂದ ಅರ್ಕಾವತಿ ಬಡಾವಣೆ ನಿರ್ಮಾಣ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ನಿವೇಶನಕ್ಕಾಗಿ ಅರ್ಜಿ ಈ ಪೈಕಿ 20 ಸಾವಿರ ಜನರನ್ನ ಫಲಾನುಭವಿಗಳಾಗಿ ಕನ್ಸಿಡರ್ ಮಾಡಲಾಗುತ್ತೆ 12 ಸಾವಿರ ಜನರಿಗೆ ಬಿಡಿಎ ಯಿಂದ ರಿಜಿಸ್ಟರ್ ಕಮ್ ಸೇಲ್ ಡೀಡ್ ಮಾಡಿಕೊಡಲಾಗಿತ್ತು
2004 ರಲ್ಲಿ ಅರ್ಕಾವತಿ ಲೇಔಟ್ ನಲ್ಲಿ ನಿವೇಶನಕ್ಕೆ ಅರ್ಜಿ ಆಹ್ವಾನಿಸಿದ್ದ ಬಿಡಿಎ 2006 ರಲ್ಲಿ ನೂರಾರು ಮಂದಿಗೆ ಬಿಡಿಎ ಯಿಂದ ನಿವೇಶನ ಹಂಚಿಕೆಯಾಗಿತ್ತು 2006 ರಲ್ಲಿ 30/40 ನಿವೇಶನಕ್ಕೆ ಎರಡೂವರೆ ಲಕ್ಷ 40/60 ನಿವೇಶನಕ್ಕೆ ನಾಲ್ಕೂವರೆ ಲಕ್ಷ ಹಣ ಪಡೆದು ಹಂಚಿಕೆ ಮಾಡಿದ್ದ ಬಿಡಿಎರಿಜಿಸ್ಟರ್ ಕಮ್ ಸೇಲ್ ಡೀಡ್ ಆಗಿದ್ದರಿಂದ ನಿವೇಶನದಾರರು ಬಿಡಿಎ ಸೈಟ್ ಕನಿಷ್ಠ ಹತ್ತು ವರ್ಷ ಮಾರಾಟ ಮಾಡುವಂತಿಲ್ಲ
2014 ರಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಅರ್ಕಾವತಿ ನಿವೇಶನ ಹಿಂಪಡೆಯಲಾಗಿತ್ತು 2006 ರಿಂದ ಇಂದಿಗೂ ನಿವೇಶನ ಸಂಬಂಧ ತೆರಿಗೆ ಕಟ್ಟುತ್ತಿರುವ ನಿವೇಶನದಾರರು ರೈತರಿಂದ ಜಮೀನು ವಶಪಡಿಸಿಕೊಂಡು ಅರ್ಕಾವತಿ ಲೇಔಟ್ ಅಭಿವೃದ್ದಿ ಪಡಿಸಿದ್ದ ಬಿಡಿಎ ಆದರೆ ರೈತರಿಗೆ ಪರಿಹಾರ ಕೊಟ್ಟು ನಿವೇಶನದಾರರಿಗೆ ಸೈಟು ಹಂಚಿಕೆಯಾಗಿತ್ತು
2014 ರಿಂದ ಇದುವರೆಗೂ ನಿವೇಶನದ ಹಂಚಿಕೆಯಾಗಿ ರಿಜಿಸ್ಟರ್ ಆಗಿದ್ದ ಸೈಟ್ ಹಿಂಪಡೆಯಲಾಗಿದೆ ಇದರಿಂದ ರೈತರಿಂದ ವಶಪಡಿಸಿಕೊಂಡ ಜಮೀನು ರೈತರಿಗೂ ಹಿಂದುರುಗಿಸಿಲ್ಲ ಒಮ್ಮೆ ಹಂಚಿಕೆ ಮಾಡಿ ರಿಜಿಸ್ಟರ್ ಮಾಡಿಕೊಟ್ಟಿರುವ ತಮ್ಮ ನಿವೇಶನಗಳಿಗೆ ಹೋಗಲಿಕ್ಕೂ ಬಿಡ್ತಿಲ್ಲಈ ಬಗ್ಗೆ ಪ್ರಶ್ನೆ ಮಾಡಿ ಅರ್ಕಾವತಿಯಲ್ಲಿ ಸೈಟಿಲ್ಲ ಕೆಂಪೇಗೌಡ ಲೇಔಟ್ ನಲ್ಲಿ ನೋಡೋಣ ಅಂತಾರೆ
ಅರ್ಕಾವತಿ ಲೇಔಟ್ ನಲ್ಲಿ ಅಕ್ರಮ ಎಸಗಲಾಗಿದೆ ಹಾಗೆ ಅರ್ಕಾವತಿ ಲೇಔಟ್ ನಲ್ಲಿ ವಶಪಡಿಸಿಕೊಂಡಿರುವ ಜಾಗ ಭೂಗಳ್ಳರ ಪಾಲಾಗ್ತಿದೆ ಇದರಿಂದ ಅಸಲಿ ಫಲಾನುಭವಿಗಳಾಗಿರುವ ನಿವೇಶನದಾರರಿಗೆ ತೊಂದರೆಯಾಗ್ತಿದೆಯೆಂದು ದೂರು ನೀಡಲಾಗಿದೆ.