ಚಾಮರಾಜನಗರ : ಭಾರೀ ಮಳೆಗೆ ಹೋಟೆಲ್ ಗೋಡೆ ಕುಸಿದು ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹನೂರು ಪಟ್ಟಣದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ಜಮ್ ಜಮ್ ಹೋಟೆಲ್ ನ ಗೋಡೆಯೂ ಮಳೆ ಆರ್ಭಟಕ್ಕೆ ಕುಸಿದಿದ್ದು, ಹೋಟೆಲ್ ಒಳಗಡೆ ಅಡುಗೆ ತಯಾರಿಕೆಯಲ್ಲಿ ನಿರತರಾಗಿದ್ದಂತಹ ತೌಸಿಫ್, ನದಿಮ್, ಅಪ್ನಾನ್, ಶೋಭಾ ಎಂಬ ನಾಲ್ಕು ಮಂಧಿ ಅದೃಷ್ಟವಶಾತ್ ಪಾರಾಗಿದ್ದಾರೆ.
ಘಟನೆಯಿಂದ ಯಾವುದೇ ಅನಾಹುತ ಆಗುಲ್ಲವಾದ್ರು ಕೂಡ ಹೋಟೆಲ್ ನ ಒಳಗಿದ್ದಂತಹ ವಿವಿಧ ಪೀಠೋಪಕರಣಗಳು
ಹಾನಿಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತಗಮನ ಹರಿಸಿ ನಷ್ಟಕ್ಕೆ ಒಳಗಾಗಿರುವ ಅಂಗಡಿ ಮಾಲಿಕರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.