ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿನ ವಕ್ಪ್ ಆಸ್ತಿ ಸಂರಕ್ಷಣೆ ಕುರಿತಾಗಿ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಗೆ ಗೈರಾದ ಸಿಂದಗಿ ಪುರಸಭೆ ಮುಖ್ಯಾಧಿಕಾರಿ ಸುರೇಶ್ ನಾಯಕ ಅಮಾನತು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಶಾಸಕರು ಸಚಿವರ ಸಭೆಗೆ ಗೈರಾದ ಅಧಿಕಾರಿಗಳಿಗೆ ಸಸ್ಪೆಂಡ್ ಮಾಡುವಂತೆ ಖಡಕ್ ಆಗಿಯೇ ಸೂಚನೆ ಕೊಟ್ಟಿದ್ದಾರೆ.
ವಿಜಯಪುರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಕ್ಫ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ, ಸಭೆ ನಡೆಸಿದ್ರು, ವಕ್ಫ್ ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದಂತೆ ಕಡಿಮೆ ಪ್ರಗತಿ ಸಾಧಿಸಿದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ್ರು. ಇನ್ನು ವಿಜಯಪುರ ಜಿಲ್ಲೆಯ ವಕ್ಫ್ ಅಧಿಕಾರಿಗಳಿಗೂ ಮೈ ಚಳಿ ಬಿಡಿಸಿದ್ರು, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಜಮೀರ್ ಅಹ್ಮದ್, ವಿಜಯಪುರ ನಗರದಲ್ಲಿ ನೀವು ಓಡಾಡಿದ್ದೀರಾ, ಎಂದು ಪ್ರಶ್ನಿಸಿದ್ರು,
ನಿತ್ಯ ಓಡಾಡ್ತೀನಿ ಎಂದ ಆಯುಕ್ತ ವಿಜಯ್ ಕುಮಾರ್ ಮೆಕ್ಕಳಕಿ ಮೇಲೆ ಕೆಂಡಾಮಂಡಲರಾದ್ರು, ವಿಜಯಪುರ ನಗರದಲ್ಲಿ ಒಂದಾದರೂ ರಸ್ತೆ ಸರಿಯಾಗಿ ಇದೆಯಾ, ಅಲ್ಪಸಂಖ್ಯಾತರ ಕಾಲೋನಿಗೆ ಯಾರಾದರೂ ರಸ್ತೆ ಮಾಡಬೇಡಾ ಎಂದಿದ್ದಾರಾ, ಶಾಸಕ ಯತ್ನಾಳ್ ಗಡ್ಡಧಾರಿಗಳು, ಮುಸ್ಲಿಮರು ತಮ್ಮ ಬಳಿ ಬಾರದಂತೆ ಸಾರ್ವಜನಿಕವಾಗಿ ಹೇಳಿದ್ದಾರೆ. ನಮ್ಮ ಜನ ಯಾರ ಹತ್ತಿರ ಹೋಗಬೇಕು, ಸರ್ಕಾರ ಜನರಿಗೆ ರಸ್ತೆ, ಕುಡಿಯುವ ನೀರು, ಹಾಗೂ ಚರಂಡಿ ಸಮರ್ಪಕವಾಗಿ ಸೌಲಭ್ಯ ಕಲ್ಪಿಸಬೇಕು ನಮ್ಮ ಜವಾಬ್ದಾರಿ ಎಂದು ತರಾಟೆಗೆ ತೆಗೆದುಕೊಂಡ್ರು.
ಈಚೆಗೆ ಮಳೆಯಿಂದ ಕೆಲವು ರಸ್ತೆ ಹಾಳಾಗಿ ರಬಹುದು ನನಗೂ ಗೊತ್ತಾಗುತ್ತದೆ. ಆದ್ರೆ ಎಲ್ಲಾ ರಸ್ತೆಗಳು ಹದಗೆಟ್ಟಿವೆ ಎಂದ್ರೆ ಹೇಗೆ, ಏನು ಕೆಲ್ಸ ಮಾಡ್ತೀರಾ, ಸರ್ಕಾರ ದುಡ್ಡು ಕೊಡೋಕೆ ರೆಡಿಯಿದೆ. ಎಸ್ಟಿಮೇಟ್ ತಯಾರಿಸಿ ಕಳುಹಿಸಿ, ಅಲ್ಪಸಂಖ್ಯಾತರ ಇಲಾಖೆಯಿಂದಲೂ ಅನುದಾನ ಮಂಜೂರು ಮಾಡಿಸುವ ಬಗ್ಗೆ ಭರವಸೆ ನೀಡಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಸಚಿವ ಶಿವಾನಂದ ಪಾಟೀಲ, ವಿಜಯಪುರ ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿರೋದು ಅಲ್ಪಸಂಖ್ಯಾತರು, ಮೂರು ದಿನ ಮನೆಯೊಳಗೆ ನೀರು ನಿಂತಿವೆ. ಪಾಲಿಕೆಯಿಂದ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಇನ್ನೂ ಶಾಸಕರ ಸಚಿವರ ಸಭೆಗೆ ಹಾಜರಾಗಿ ಮಾಹಿತಿ ನೀಡಬೇಕು ಯಾವುದೇ ಇಲಾಖೆ ಅಧಿಕಾರಿಗಳು ಇರಲಿ ಶಾಸಕರ ಸಚಿವರ ಸಭೆಗೆ ಗೈರಾದ್ರೆ ಸಸ್ಪೆಂಡ್ ಮಾಡುವಂತೆ ಜಿಲ್ಲಾಧಿಕಾರಿ ಟಿ ಭೂಬಾಲನ್ ಅವರಿಗೆ ಸೂಚನೆ ಕೊಟ್ಟರು.