ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು. ದರ್ಶನ್ ವಿರುದ್ಧ ಪೊಲೀಸರು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ದರ್ಶನ್ ಪರ ವಕೀಲರಾದ ಸಿ.ವಿ.ನಾಗೇಶ್ ಅವರು ವಾದ ಮಂಡನೆ ಮಾಡಿದ್ದರು. ಇದಕ್ಕೆ ಪೊಲೀಸರ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಮಾಡಿದರು.
ಹೌದು . ಸತತವಾಗಿ ಮಧ್ಯಾಹ್ನದಿಂದ ಸಂಜೆವರೆಗೆ ವಾದ ಪ್ರದಿವಾದಗಳು ನಡೆಯುತ್ತಲೇ ಇದ್ದು ಕೂಲಂಕಷವಾಗಿ ವಾದವನ್ನು ಆಲಿಸಿದ ಜಡ್ಜ್ ನಾಳೆ ಮಧ್ಯಾಹ್ನ 12 ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಲಯ
ನಿನ್ನೆಯಷ್ಟೇ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಭೇಟಿ ಕೊಟ್ಟು ದರ್ಶನ್ ಭೇಟಿಯಾಗಿ ಇಂದು ಬೇಲ್ ಸಿಗುವ ನಿರೀಕ್ಷೆ ಇದೆ ಯಾವುದಕ್ಕೂ ಹೆದರಬೇಡಿ ಎಂದು ವಿಶ್ವಾಸ ತುಂಬಿ ಬಂದಿದ್ದರು ಆದರೆ ಅವರ ಬ್ಯಾಡ್ ಲಕ್ ಎನ್ನ ಬಹುದು ಇಂದೂ ಕೂಡ ಬಿಡುಗಡೆಯ ಭಾಗ್ಯ ದೊರೆತಿಲ್ಲ.
ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ನಾಗರಾಜು A11 ಆದರೆ, ಕಾರು ಚಾಲಕ ಲಕ್ಷ್ಮಣ್ A12 ಆಗಿದ್ದಾರೆ. ಆರೋಪಿಗಳ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡನೆ ಮಾಡಿದ್ದಾರೆ. ‘ಹಿಂದೆಂದೂ ನಡೆಯದ ಘಟನೆಯಂತೆ ಬಿಂಬಿಸಲಾಗಿದೆ. ಘಟನೆ ಆಧರಿಸಿ ಸೆನ್ಸೇಷನ್ ಮಾಡುವ ಬದಲು ವ್ಯಕ್ತಿ ಆಧರಿಸಿ ಸೆನ್ಸೇಷನ್ ಮಾಡಲಾಗುತ್ತಿದೆ. ರಾಜಕಾರಣಿಗಳು, ನಟರ ಪ್ರಕರಣಗಳನ್ನು ಸೆನ್ಸೇಷನ್ ಮಾಡಲಾಗುತ್ತಿದೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.