ವಿಜಯಪುರ: ವಕ್ಫ್ ಆಸ್ತಿ ಯಾರ ಅಪ್ಪನ ಆಸ್ತಿಯೆಂದು ಬಡವರಿಗೆ ಹಂಚಿಕೆ ಮಾಡೋದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಯತ್ನಾಳ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಯಾರಪ್ಪನ ಆಸ್ತಿ ಎಂದು ವಕ್ಫ್ ಆಸ್ತಿ ಹಂಚಬೇಕು. ಇದು ನನ್ನ ಅಪ್ಪನ ಆಸ್ತಿ ಆಗಿದ್ದರೆ ಬಡವರಿಗೆ ಹಂಚಬಹುದು. ಮತ್ತೊಂದೆಡೆ ಶಾಸಕ ಯತ್ನಾಳ್ ಅವರ ಅಪ್ಪನ ಆಸ್ತಿಯಾಗಿದ್ದರೂ ಬಡವರಿಗೆ ಹಂಚಬಹುದು.
ಇದು ನನ್ನ ಅಪ್ಪನ ಆಸ್ತಿಯು ಅಲ್ಲ, ಯತ್ನಾಳ್ ಅಪ್ಪನ ಆಸ್ತಿಯು ಅಲ್ಲ. ದಾನಿಗಳು ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದಾನ ಮಾಡಿದ್ದು. ಮಿಸ್ಟರ್ ಯತ್ನಾಳ್ ಅವರೆ ಒಂದು ಇಂಚು ಸರ್ಕಾರಿ ಭೂಮಿಯನ್ನ ವಕ್ಫ್ಗೆ ತಗೊಂಡಿಲ್ಲ. ರಾಜ್ಯದಲ್ಲಿ 1.12 ಲಕ್ಷ ಏಕರೆ ಭೂಮಿಯನ್ನು ದಾನ ಮಾಡಿದ್ದಾರೆ. ಇದನ್ನ ಯಾರಪ್ಪನ ಆಸ್ತಿ ಎಂದು ಬಡವರಿಗೆ ಹಂಚೋದು ಎಂದು ಪ್ರಶ್ನೆ ಮಾಡಿದ್ದಾರೆ.