ಬೆಂಗಳೂರು: ಹರಿಯಾಣದ ಕಾಂಗ್ರೆಸ್ ಸೋಲಿಗೆ ಇದೀಗ ರಾಜ್ಯದ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಕಾಂಗ್ರೆಸ್ ನಾಯಕರೇ ನೇರ ಆರೋಪ ಮಾಡಿದ್ದಾರೆ.ಸಿಎಂ ಮುಡಾ,ವಾಲ್ಮೀಕಿ ಪ್ರಕರಣವನ್ನ ಬಿಜೆಪಿ ಬಳಸಿಕೊಂಡು ಅಪಪ್ರಚಾರದ ಮೂಲಕ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ ಬಿ ಕೋಳಿವಾಡ ಮತ್ತೆ ಸಿದ್ದರಾಮಯ್ಯ ವಿರುದ್ಧ ಬೆಂಕಿಯುಗಳಿದ್ದಾರೆ.ಹರಿಯಾಣ ರಾಜ್ಯದ ಸೋಲಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಕಾರಣ ಎಂದು ಕೆ ಬಿ ಕೋಳಿವಾಡ ಮತ್ತೆ ಗುಡುಗಿದ್ದಾರೆ.
ಹರಿಯಾಣದಲ್ಲಿ ಈ ಬಾರೀ ಬದಲಾವಣೆ ನಿಶ್ಚಿತ. ಈ ಬಾರಿ ಜನ ಬಿಜೆಪಿಯನ್ನ ದೂರ ಇಡ್ತಾರೆ. ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ಏರುತ್ತೆ ಎಂದು ಹತ್ತಾರು ಚುನಾವಣಾ ಸಂಮಿಕ್ಷೆ ಚುನಾವಣಾ ಮುಗಿದ ಬಳಿಕ ಭವಿಷ್ಯ ನುಡಿದಿದ್ವು. ಜೊತೆಗೆ ವಾತಾವರಣ ಸಹ ಅದಕ್ಕೆ ಪೂರಕವಾಗಿತ್ತು. ಆದ್ರೆ ಇದೀಗ ಹರಿಯಾಣದ ಫಲಿತಾಂಶ ಹೊರ ಬಿದಿದ್ದೆ.ಮತ್ತೆ ಅಡಳಿತ ಪಕ್ಷ ಬಿಜೆಪಿಗೇ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೆ ಏರಿದ್ದು ಎಲ್ಲಾವನ್ನ ಊಲ್ಟಾ ಮಾಡಿದೆ.ಅದ್ರೆ ಈ ಸೋಲಿಗೆ ಕೈನಾಯಕರು ಇದೀಗ ಸಿಎಂ ಸಿದ್ದರಾಮಯ್ಯರತ್ತ ಕೈ ಬೆರಳು ತೋರುತ್ತಿದ್ದಾರೆ.
ಹರಿಯಾಣದಲ್ಲಿ ಈ ಬಾರೀ ಕಾಂಗ್ರೆಸ್ ಅಧಿಕಾರಕ್ಕೆ ಬಂದೆ ಬಿಡ್ತು ಎಂದು ಎಲ್ಲಾ ಹೇಳ್ತಿದ್ರು.ಆದ್ರೆ, ಇದೀಗ ಚುನಾವಣೆ ನಂತರ ಎಲ್ಲಾ ಲೆಕ್ಕಚಾರ ಊಲ್ಟಾ ಆಗಿದ್ದು ಜನವಿರೋಧದ ನಡುವೆಯೂ ಕಮಲ ಅರಳಿ ನಿಂತಿದೆ. ಹಾಗಾದ್ರೆ ಹರಿಯಾಣದಲ್ಲಿ ಕೈ ಸೋಲಿಗೂ ರಾಜ್ಯಕ್ಕೂ ಏನಾದರೂ ಸಂಬಂಧ ಇದ್ಯಾ ಎಂದು ಇದೀಗ ಲೆಕ್ಕಾಚಾರ ಆರಂಭವಾಗಿದೆ.ಈ ಬಗ್ಗೆ ಸ್ವತಃ ಕಾಂಗ್ರೆಸ್ ನ ಮಾಜಿ ಸ್ವೀಕರ್ ಕೋಳಿವಾಡ ಸ್ಪೋಟಕ ಹೇಳಿಕೆ ನೀಡಿದ್ದು ಈ ಸೋಲಿಗೆ ಸಿಎಂ ಸಿದ್ದರಾಮಯ್ಯ ನೇರ ಕಾರಣ. ಬಿಜೆಪಿ ಸಿದ್ದರಾಮಯ್ಯರ ಮೂಡ ಪ್ರಕರಣವನ್ನ ಇಟ್ಕೊಂಡು ಅಲ್ಲಿ ಪ್ರಚಾರ ಮಾಡುವ ಮೂಲಕ ಗೆಲುವು ಪಡೆದಿದೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಬಿಜೆಪಿಯ ಅಪಪ್ರಚಾರ ಮುಖ್ಯ ಕಾರಣ ಎಂದು ಕೋಳಿವಾಡ ಹೇಳಿದ್ದಾರೆ.
ಇನ್ನು ಹರಿಯಾಣದ ಸೋಲಿಗೆ ಕೈನಾಯಕರು ನೇರವಾಗಿ ಸಿಎಂ ಸಿದ್ದರಾಮಯ್ಯನವರತ್ತ ಬೊಟ್ಟು ಮಾಡಿದ್ದಾರೆ. ಇದರ ನಡುವೆ ಬಿಜೆಪಿ ಸಹ ಕರ್ನಾಟಕದಲ್ಲಿನ ಭ್ರಷ್ಟಾಚಾರ ಹರಿಯಾಣದಲ್ಲಿ ಪ್ರತಿಧ್ಚನಿಸಿತು. ಇದನ್ನ ನಾವು ಅಲ್ಲಿ ಪ್ರಚಾರ ಮಾಡಿದ್ವಿ ಇದು ಅಲ್ಲಿನ ಜನರಿಗೆ ಮುಟ್ಟಿತು. ಹೀಗಾಗಿ ಇಲ್ಲಿನ ಭ್ರಷ್ಟಾಚಾರ ಸಹ ಅಲ್ಲಿನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು . ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೋತ ಮೇಲೆ ಈ ರೀತಿ ಹೇಳಿಕೆಗಳನ್ನು ಕೊಡುವುದು ಸಹಜ ಎಂದು ತಿಳಿಸಿದರು.
ಒಟ್ಟಾರೆ, ಜನವಿರೋಧಿಯ ಅಲೆಯ ನಡುವೆಯೂ ಮತ್ತೆ ಕಮಲ ಹರಿಯಾಣದಲ್ಲಿ ಮತ್ತೆ ಅರಳಿದೆ.ಇದರ ನಡುವೆ ಇದೀಗ ಸಿಎಂ ಸಿದ್ದರಾಮಯ್ಯ ಪಾತ್ರ ಈ ಸೋಲಿನಲ್ಲಿದೆ ಎಂದು ಹೇಳುವ ಮೂಲಕ ಕೈ ನಾಯಕರು ಟಗರು ಕಡೆ ಬೊಟ್ಟು ಮಾಡಿರೋದು ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.