ಹುಬ್ಬಳ್ಳಿ: ಎ.ಜಿ.ಎಂ ತಾಂತ್ರಿಕ ಅಭಿಯಾಂತ್ರಿಕ ಮಹಾವಿದ್ಯಾಲಯ ಹಾಗೂ ಬಿ.ಬಿ.ಎ ಮತ್ತು ಬಿ.ಸಿ.ಎ ಮಹಾವಿದ್ಯಾಲಯ ವರೂರ ನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಹಾಗೂ ಬಿ.ಬಿ.ಎ ಮತ್ತು ಬಿ.ಸಿ.ಎ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಒಂಬತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಸಹ ಭಾಗವಹಿಸಿದ್ದರು..
ಸ್ವಸ್ತಿ ಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರ ಅಧ್ಯಕ್ಷತೆ ಯಲಿ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ನಿರ್ದೇಶಕರಾದ ಪ್ರೊ.ಸಂದೀಪ ಕ್ಯಾತನವರ ಮಾತನಾಡಿ ನಮ್ಮ ಸಂಸ್ಥೆಯು ಮಕ್ಕಳ ಬದುಕಿಗೆ ಆಶಾಕಿರಣವಾಗಿ ನೆಲೆ ನಿಂತಿದೆ.ಎಕೆಂದರೆ ಆಧುನಿಕ ಯುಗದಲ್ಲಿ ಮಕ್ಕಳಲ್ಲಿ ಇರಬೇಕಾದ ಜೊತೆಗೆ ಕಲಿಸಬೇಕಾದ ನೈತಿಕ ಮೌಲ್ಯ, ಸಾಮಾಜಿಕ ಮೌಲ್ಯ ಜೊತೆಗೆ ಉತ್ತಮ ಸಂಸ್ಕಾರಗಳೊಂದಿಗೆ ಶಿಕ್ಷಣವನ್ನು ನೀಡುವ ಏಕೈಕ ಸಂಸ್ಥೆ ಎಂದರು.ಹೀಗೆ ಮಕ್ಕಳ ಬದುಕನ್ನು ಶ್ರೀಮಂತ ಗೊಳಿಸುವುದರ ಜೊತೆಗೆ ಅವರಿಗೆ ಅವಕಾಶಗಳ ಬಗೆಗೆ ತಿಳಿಸಿ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಸತತ ಪ್ರಯತ್ನ ನಡೆಸುತ್ತಿದೆ.
ಮತ್ತು ಅವರ ಬದುಕನ್ನು ಕಟ್ಟಿಕೊಳ್ಳಲು ಸುವರ್ಣ ಅವಕಾಶವನ್ನು ಕಲ್ಪಿಸಿಟ್ಟು ವೈಯಕ್ತಿಕ ಶಿಸ್ತು ಬೆಳೆಸಿಕೊಳ್ಳಲು ಅವರಿಗೆ ಸಕಲ ಸೌಲಭ್ಯಗಳನ್ನು ಒದಗಿಸುತ್ತಿದೆ.ಮಕ್ಕಳಲ್ಲಿ ಅಡಗಿರುವ ಸುಪ್ತವಾದ ಶಕ್ತಿಯನ್ನು ಗುರುತಿಸಿ ಅನಾವರಣ ಗೊಳಿಸುವಂತೆ ತಿಳಿಸಲಾಗುತ್ತದೆ ಎಂದರು . ಕಾರ್ಯಕ್ರಮದಲ್ಲಿ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಪರಮ ಪೂಜ್ಯ ರಾಷ್ಟ್ರ ಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಾಲಕರ, ಪೋಷಕರು ಆರ್ಥಿಕ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ತಮ್ಮ ಶಿಕ್ಷಣ ಪೊರೈಸಬೇಕು ಜೊತೆಗೆ ಸಮಯವನ್ನು ಸರಿಯಾಗಿ ಉಪಯೋಗಿಕೊಂಡಾಗ ಬದುಕು ಬಂಗಾರವಾಗುತ್ತದೆ.
ಶಿಕ್ಷಣಕ್ಕಾಗಿ ಸಹಾಯ ಮಾಡುವವರು ಕಡಿಮೆ ಅಂತವರಲಿ ಶ್ರೀವಿಜಯ ಸಂಕೇಶ್ವರ ಸಹ ಒಬ್ಬರು ಜಗತ್ತಿನ ಎಲ್ಲ ಸುಖಗಳನ್ನು ಅನುಭವಿಸಬೇಕಾದರೆ ಅದರ ಮೂಲ ಶಿಕ್ಷಣವಾಗಿದೆ ಎಂದರು ಜಗತ್ತಿನಲ್ಲಿ ಕಳ್ಳತನ ಮಾಡಿದೆ ಇರುವ ಸಂಪತ್ತು ಎಂದರೆ ಅದು ಶಿಕ್ಷಣವೆಂದರು.ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿದರೆ ಅದು ಅವರ ಬದುಕಿಗೆ ಬಹಳ ಮುಖ್ಯವಾದ ಅಂಶವಾಗಿದೆಂದರು ಆರೋಗ್ಯವೆ ಭಾಗ್ಯ ಅದನ್ನು ಕಾಪಾಡಿಕೊಳ್ಳಬೇಕೆಂದರು ಹಾಗೂ ನಮ್ಮಗೆ ಯಾವುದನ್ನು ಗಳಿಸುವ, ಉಳಿಸುವ ಪಲಾಪೇಕ್ಷೆ ಇಲ್ಲ ಆದರೆ ಬಡವರ ಮಕ್ಕಳು ಶಿಕ್ಷಣವಂತರಾಗಲಿ, ಸಮಾಜಕ್ಕೆ ಒಳ್ಳೆಯದು ಮಾಡಲಿ ಒಳ್ಳೆಯವರಾಗಲಿ ಎಂದು ಆರ್ಶೀವಚನ ಮಾಡಿದರು. ಮಹಾವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಇಂಜಿನೀಯರಿಂಗ್ ಮತ್ತು ಬಿ.ಸಿ.ಎ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಲಾಯಿತು.