ಬೆಂಗಳೂರು: ಹರಿಯಾಣದಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ ಎಂದು ವಿಪಕ್ಷಗಳು ಬೊಬ್ಬೆ ಹಾಕುತ್ತೀವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ ಎಂದು ವಿಪಕ್ಷಗಳು ಬೊಬ್ಬೆ ಹಾಕುತ್ತಿದ್ದವು. ಆದರೆ ಬಿಜೆಪಿ ಸತತವಾಗಿ ಮೂರನೇ ಬಾರಿಗೆ ಅಧಿಕಾರದತ್ತ ದಾಪುಗಾಲು ಇಡುತ್ತಿದೆ. 3ನೇ ಬಾರಿ ಬಿಜೆಪಿ ಅಧಿಕಾರದತ್ತ ಬರ್ತಿದೆ ಎನ್ನುವುದು ಸಂತೋಷದ ವಿಷಯವಾಗಿದೆ ಎಂದರು.
ಹರಿಯಾಣದಲ್ಲಿ ಕಾಂಗ್ರೆಸ್ ನವ್ರು ಬಹಳಷ್ಟು ಪಿತೂರಿ ಮಾಡಿದ್ರುಕಾಂಗ್ರೆಸ್ ನವರು ಏನು ತಿಪ್ಪರಲಾಗ ಹಾಕಿದ್ರು, ಕೂಡ ನರೇಂದ್ರ ಮೋದಿ ಪರವಾಗಿ ಜನರು ವಿಶ್ವಾಸ ವ್ಯಕ್ತಪಡಿಸಿದ್ದಾರೆಅಲ್ಲಿನ ಗೆಲುವು ನಮಗೆ ಬಹಳಷ್ಟು ಸಂತೋಷವನ್ನು ತಂದು ಕೊಟ್ಟಿದೆಜಮ್ಮು ಕಾಶ್ಮೀರದಲ್ಲಿ 30ಕ್ಕೂ ಹೆಚ್ಚು ಸೀಟು ಗೆಲುವು ದೊಡ್ಡ ಸಾಧನೆಮುಂದಿನ ಮಹಾರಾಷ್ಟ್ರ ಚುನಾವಣೆ ಮೇಲೂ ಬಹಳ ಪರಿಣಾಮ ಬೀರುತ್ತದೆ ಈ ಗೆಲುವು ಅಲ್ಲಿಯೂ ನಮಗೆ ದೊಡ್ಡ ಶಕ್ತಿ ಕೊಡುತ್ತದೆ
ಹಾಗೆಕಾಂಗ್ರೆಸ್ ಗ್ಯಾರಂಟಿ ಮುಖ್ಯ ಅಲ್ಲ ಮೋದಿ ಅಭಿವೃದ್ಧಿ ಗ್ಯಾರಂಟಿ ಮುಖ್ಯ ಎಂದು ಹರಿಯಾಣ ಜನ ತೀರ್ಮನಾ ಮಾಡಿದ್ರು ಸತತ ಮೂರನೇ ಬಾರಿ ಬಿಜೆಪಿಗೆ ಗೆಲುವಾಗಿದೆ.
ಮುಡಾ ಪ್ರಕರಣ ಕೂಡಾ ಹರಿಯಾಣದಲ್ಲಿ ಚರ್ಚೆ ಆಗಿದೆ.ಹೀಗೆ ಅನೇಕ ವಿಷಯಗಳು ಸಹ ಚರ್ಚೆ ಆಗಿತ್ತು. ಇದೆಲ್ಲಾ ಸೇರಿ ಹರಿಯಾಣದಲ್ಲಿ ಗೆಲುವಿಗೆ ಕಾರಣ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹೇಳಿದರು.