ಬೆಂಗಳೂರು: ಜಾತಿ ನಿಂದನೆ ಆರೋಪದಡಿ ರಿಯಾಲಿಟಿ ಶೋ ಸ್ಪರ್ಧಿ ಕಾರ್ತಿಕ್ ಅಲಿಯಾಸ್ ಹುಲಿ ಕಾರ್ತಿಕ್ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಹೌದು .. ಹುಲಿ ಕಾರ್ತಿಕ್ ಸಮುದಾಯವೊಂದನ್ನು ಹಿಯಾಳಿಸುವ ರೀತಿಯಲ್ಲಿ ಮಾತನಾಡಿದ್ದ ಆರೋಪ ಮೇಲೆ ಕೇಳಿ ಬಂದಿತ್ತು.
PM Kisan Yojana: ರೈತರ ಸಂಜೀವಿನಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ: ವರ್ಷಕ್ಕೆ 6,000 ರೂ. ಧನಸಹಾಯ
ಹುಲಿ ಕಾರ್ತಿಕ್ ಕಿರುತೆರೆ ರಿಯಾಲಿಟಿ ಶೋನಲ್ಲಿ ಗೆದ್ದು ಹಿರಿ ತೆರೆಯಲ್ಲಿ ಮಿಂಚುತ್ತಿದ್ದಾರೆ. ಆದರೀಗ ಜಾತಿ ನಿಂದನೆ ಮಾಡಿದ್ದಾನೆಂದು ನಟನ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಹುಲಿ ಕಾರ್ತಿಕ್ ಮಾತ್ರವಲ್ಲದೆ ಸಂಭಾಷಣೆಕಾರ , ಕಾರ್ಯಕ್ರಮದ ನಿರ್ಮಾಪಕ , ನಿರ್ದೇಶಕನ ಮೇಲೂ ಕೂಡ ಕೇಸ್ ದಾಖಲಾಗಿದೆ.
ಎ-1ಆರೋಪಿಯಾಗಿ ಹುಲಿ ಕಾರ್ತಿಕ್ ಹೆಸರು ಉಲ್ಲೇಖ ಮಾಡಲಾಗಿದ್ದು ಲೋಕೇಶ್ ಎಂಬುವವರಿಂದ ದಾಖಲಾಯ್ತು ದೂರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಲರ್ಸ್ ಕನ್ನಡ ವಾಹಿನಿಯ ‘ಅನುಬಂಧ ಅವಾರ್ಡ್’ ಕಾರ್ಯಕ್ರಮದಲ್ಲಿ ಬಳಕೆ ಮಾಡಿದ ಪದವು ಬೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಹೀಗಾಗಿ ಜಾತಿ ನಿಂದಿಸಿ ಮಾತನಾಡಿದ ನಟನ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ.