ಬೆಂಗಳೂರು: ಕಂಠ ಪೂರ್ತಿ ಕುಡಿದು ಕಾಡುಗೋಡಿ ಟ್ರೀ ಪಾರ್ಕ್ ಮೆಟ್ರೋನಿಲ್ದಾಣದಲ್ಲಿ ಯುವಕರ ಪುಂಡಾಟ ನಡೆಸಿದ್ದು ಮೂವರು ಯುವಕರನ್ನ ಬಂಧಿಸಿರೋ ಕಾಡುಗೋಡಿ ಪೊಲೀಸರು.
ಮೂವರು ಭಾನುವಾರ ಕುಡಿದ ಅಮಲಿನಲ್ಲಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಭದ್ರತಾ ಅಧಿಕಾರಿಗಳು ಅವರನ್ನು ತಡೆದಿದ್ದಾರೆ. ಈ ವೇಳೆ ಸಿಬ್ಬಂದಿ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ.
ಮಹಿಳಾ ಸಿಬ್ಬಂದಿ ಹಾಗೂ ಟಿಕೆಟ್ ಆಪರೇಟರ್ ಜೊತೆ ಅಸಭ್ಯ ಪದ ಬಳಸಿ ನಿಂದಿಸಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಮೂವರು ಸ್ಥಳದಿಂದ ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಕಾಡುಗೋಡಿ ಪೊಲೀಸ್ರಿಂದ ಆರೋಪಿಗಳ ಬಂಧನ ಮೂವರು ಯುವಕರು ಕಲ್ಬುರ್ಗಿ ಮೂಲದವರಾಗಿದ್ದು,ದಿನಗೂಲಿ ಕೆಲಸ ಮಾಡ್ತಿದ್ದದ್ದು ಬೆಳಕಿಗೆ ಬಂದಿದೆ.