ಬೆಂಗಳೂರು: ಈ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡ್ತಿಲ್ಲ. ಎಲ್ಲದರಲ್ಲೂ ಸರ್ಕಾರ ವಿಫಲವಾಗಿದೆ. ಹಲವು ಕುಟುಂಬಗಳ ಮನೆಗಳು ಜಲಾವೃತ ಆಗಿವೆ, ರಾತ್ರಿ ಎಲ್ಲ ಜನರಿಗೆ ನಿದ್ದೆ ಇಲ್ಲ. ಗುಂಡಿ ಮುಚ್ಚಲು ಅದೇನೋ ಗಡುವು ಕೊಟ್ಟಿದ್ರಲ್ಲ. ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ರಲ್ಲ. ಈ ಸರ್ಕಾರಕ್ಕೆ ಜನರ ಸಮಸ್ಯೆ ಬಗ್ಗೆ ಚಿಂತೆ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಸಚಿವ ಎಚ್. ಡಿ ಕುಮಾರಸ್ವಾಮಿ ಕಿಡಿ ಕಾರಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಗಳ ಬಗ್ಗೆ ದೇವರೇ ಕಾಪಾಡಬೇಕು. ಈಗಲೂ ಕಾಲ ಮಿಂಚಿಲ್ಲ, ಮಳೆ ಅನಾಹುತ ಆಗಿದೆ. ನಿಮ್ಮ ಆಡಳಿತ ಸರಿ ಮಾಡ್ಕೊಳ್ಳಿ. ವಿಪಕ್ಷಗಳನ್ನು ಕ್ಷಮಿಸ್ತೀರಾ ಕ್ಷಮಿಸ್ತೀರಾ ಅಂತಾ ನಿನ್ನೆ ಹೇಳ್ತಿದ್ರು. ನಮ್ಮನ್ನ ಜನ ಕ್ಷಮಿಸ್ತಾರೋ ಅಪ್ಪಿಕೊಳ್ತಾರೋ ಅದನ್ನು ಜನ ತೀರ್ಮಾನ ಮಾಡ್ತಾರೆ. ಅದೇ ಜನ ಸಿದ್ದರಾಮಯ್ಯ ಅವರಿಗೇ ಏನು ಮಾಡಬೇಕು ಅಂತಾ ಹೇಳಲಿ. ಇಂಥ ಆಡಳಿತ ಕೊಟ್ಟಿದ್ದೀರಲ್ಲ ಜನರ ಕ್ಷಮೆ ಅವರು ಕೇಳಬೇಕು ಎಂದು ವಾಗ್ದಾಳಿ ನಡೆಸಿದರು