ಬಳ್ಳಾರಿ : ಸಿಎಂ ಸಿದ್ದರಾಮಯ್ಯ ಬಗ್ಗೆ ಸಚಿವ ಸೋಮಣ್ಣ ಸಾಫ್ಟ್ ಕಾರ್ನರ್ ಮುಡಾ ಅಕ್ರಮ ಬಗ್ಗೆ ಪದೇ ಪದೇ ಮಾತಾಡೋದು ಬೇಡ ಕಾನೂನಿದೆ, ಅದರ ಪಾಡಿಗೆ ಅದು ತನಿಖೆ ಮಾಡುತ್ತೆ ಎಷ್ಟು ಬಾರಿ ಈ ಬಗ್ಗೆ ಮಾತಾಡುದ್ರು ಅಷ್ಟೆ ಸಿಎಂ ರಾಜಿನಾಮೆ ಪಡೆಯೋದು ಬಿಡೋದು ಅವರ ಪಕ್ಷಕ್ಕೆ ಬಿಟ್ಟ ವಿಚಾರನಾವು ಯಾರೂ ಸಿದ್ದರಾಮಯ್ಯ ಪತ್ನಿ ಬಗ್ಗೆ ಮಾತನಾಡಿಲ್ಲ ಊಹೆ ಮಾಡಿಕೊಂಡು ಮಾತನಾಡಬೇಡಿ ಸಿದ್ದರಾಮಯ್ಯ ಪತ್ನಿ ಬಗ್ಗೆ ನಮಗೆ ಗೌರವ ಇದೆ ಮೂಡ ಹಗರಣದ ವಿಚಾರದಲ್ಲಿ ಕಾಂಗ್ರೆಸ್ ಏನು ಮಾಡ್ತದೆ ಅನ್ನೋದು ಅವರ ಪಕ್ಷಕ್ಕೆ ಬಿಟ್ಟಿದೆ ಎಂದು ಬಳ್ಳಾರಿಯಲ್ಲಿ ಸಚಿವ ಸೋಮಣ್ಣ ಹೇಳಿದರು.
ಹಾಗೆ ಬಳ್ಳಾರಿಯಲ್ಲಿ ರೆಡ್ಡಿ ಸಹೊದರರ ಮುನಿಸು ಹಾಗೂ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ವಿಚಾರ ರೆಡ್ಡಿ ಸಹೋದರರು, ಶ್ರೀರಾಮುಲು ಬೇರೆ ಬೇರೆಯಾದಾಗ ಏನಾಯಿತು, ಎಲ್ಲರಿಗೂ ಈಗ ಗೊತ್ತಾಗಿದೆ ಸದ್ಯ ಬಳ್ಳಾರಿ ಬಿಜೆಪಿ ಸ್ಥಿತಿ ಎಲ್ಲ ನಾಯಕರಿಗೆ ಗೊತ್ತಾಗಿದೆ ಎಲ್ಲರೂ ಬೇರೆಯಾದಾಗ ಏನಾಗಿದೆ…? ಈಗ ಎಲ್ಲಿದ್ದಾರೆ ಈಗ ಒಂದಾಗೋ ಸಮಯ ಮತ್ತೆ ಬಂದಿದೆ ಎಲ್ಲರೂ ಒಂದಾಗ್ತಾರೆ ಎಂದ ಕೇಂದ್ರ ಸಚಿವ ಸೋಮಣ್ಣ ವಿಶ್ವಾಸ ಶ್ರೀರಾಮುಲುಗೆ ಸ್ವಲ್ಪ ಆರಂಭದಲ್ಲಿ ಮುಂಗೋಪು ಅಷ್ಟೇ ಸ್ವಲ್ಪ ದಿನ ಕಾದು ನೋಡಿ ಎಲ್ಲರು ಹೇಗೆ ಒಗ್ಗಾಟ್ಟಾಗ್ತಾರೆ ಬಳ್ಳಾರಿ ಅಷ್ಟೇ ಅಲ್ಲ, ರಾಜ್ಯ ಬಿಜೆಪಿಯಲ್ಲೂ ಯಾವ ಸಮಸ್ಯೆ ಇಲ್ಲ ಮತ್ತೆ ಅಳೆ ಬಿಜೆಪಿಯನ್ನ ಸ್ವಲ್ಪ ದಿನದಲ್ಲೇ ನೋಡ್ತಿರಿ ಡಿಸೆಂಬರ್ ನಂತರ ಪಕ್ಷ ಹಳೇ ಮಾದರಿಯಲ್ಲಿ ಮತ್ತೊಮ್ಮೆ ಗಟ್ಟಿಯಾಗ್ತದೆ ರೆಡ್ಡಿ ಸಹೋದರರನ್ನು ಒಂದಾಗಿ ಮಾಡುತ್ತೇವೆ.