ರಾಮನಗರ: ಸಿಎಂ ಸಿದ್ದರಾಮಯ್ಯ ಪತ್ನಿ ಮೂಡ ಸೈಟ್ ವಾಪಸ್ ನೀಡಿದ ವಿಚಾರವಾಗಿ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಗರಣದಲ್ಲಿ ಯಾರ ಮೇಲೆ ಆರೋಪ ಇದೆಯೋ ಅವರೆಲ್ಲರೂ ಸೈಟ್ ಗಳನ್ನು ವಾಪಸ್ ನೀಡಬೇಕು. ದೇಶ ಇನ್ನೂ ಸುಭಿಕ್ಷವಾಗಲಿದೆ. ಸಿಎಂ ಪತ್ನಿಗೆ ನಾನು ಧನ್ಯವಾದ ಹೇಳುತ್ತೇನೆ. ಇದರಲ್ಲಿರುವ ಎಲ್ಲಾ ರಾಜಕಾರಣಿಗಳು ಸಿಎಂ ಪತ್ನಿಯಂತೆ ಪಾಲಿಸಿದರೆ ಉತ್ತಮ ಉದಾಹರಣೆ ಆಗುತ್ತದೆ ಎಂದರು.
ವಿರೋಧ ಪಕ್ಷಗಳಿಂದ ಸಿಎಂ ರಾಜೀನಾಮೆಗೆ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, ವಿರೋಧ ಪಕ್ಷಗಳಿಗೆ ಬೇರೆ ಕೆಲಸ ಇಲ್ಲ. ಬೆಳಗ್ಗೆ ಎದ್ದರೆ ರಾಜೀನಾಮೆ ಅಂತಾರೆ. ಸೈಟ್ ಹಿಂದಿರುಗಿಸಿದ ಮಾತ್ರಕ್ಕೆ ತಪ್ಪನ್ನು ಒಪ್ಪಿಕೊಂಡಿಲ್ಲ. ಸಾರ್ವಜನಿಕವಾಗಿ ಬಂದಿರುವ ಕಳಂಕ ನಿವಾರಣೆಗೆ ಸೈಟ್ ಹಿಂದಿರುಗಿಸಿದ್ದಾರೆ. ಸಿದ್ದರಾಮಯ್ಯ ಅವರ 60 ವರ್ಷ ರಾಜಕೀಯದಲ್ಲಿ ಯಾವುದೇ ಕಳಂಕ ಬಂದಿಲ್ಲ. ನನ್ನಿಂದ ಕಳಂಕ ಬಂದಿದೆ ಅಂತ ಅವರ ವ್ಯಕ್ತಿತ್ಯಕ್ಕಿಂತ ಈ ಆಸ್ತಿ ದೊಡ್ಡದಲ್ಲ ಅಂತ ವಾಪಾಸ್ ಕೊಟ್ಟಿದ್ದಾರೆ. ಇದು ತಪ್ಪು ಒಪ್ಪಿಕೊಂಡಂತೆ ಅಲ್ಲ ಎಂದರು.