ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿರುವ ಹಿನ್ನೆಲೆ ಹಾಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಕೇಸ್ ದಿನ ದಿನಕ್ಕೆ ಕಾವೇರುತ್ತಿದ್ದು ರಾಜೀನಾಮೆ ಕೊಡುವ ಪ್ರಸ್ತಾಪ ಕೂಡ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಅ.15ರಂದು ರಾಜ್ಯಕ್ಕೆ ಭೇಟಿ ನೀಡಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್
BREAKING: ಮಲ್ಲಿಕಾರ್ಜುನ ಖರ್ಗೆಯನ್ನ ದಿಢೀರ್ ಭೇಟಿ ಮಾಡಿರುವ ಸತೀಶ್ ಜಾರಕಿಹೊಳಿ
ಹೌದು .. ಇಡಿಯಲ್ಲಿ ದೂರು ದಾಖಲಾದ ನಂತರ ಪಕ್ಷದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಚರ್ಚಿಸಲಿರುವ ವೇಣುಗೋಪಾಲ್ ಹಾಗೆ ಸಿಎಂ ಬದಲಾವಣೆ ವದಂತಿ, ದಲಿತ,ಹಿಂದುಳಿದ ವರ್ಗಗಳ ನಾಯಕರ ಸಭೆ ಸೇರಿದಂತೆ ಹಲ ವಿಚಾರಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ
ಸಿಎಂ,ಡಿಸಿಎಂ,ಸಚಿವರು ಸೇರಿದಂತೆ ಹಲವರ ಜೊತೆ ಚರ್ಚಿಸಲಿರುವ ವೇಣುಗೋಪಾಲ್ ಪ್ರಸಕ್ತ ವಿದ್ಯಮಾನ,ಮುಂದೆ ಏನು ಮಾಡಬೇಕೆಂಬ ಬಗ್ಗೆ ಚರ್ಚಿಸುವ ಸಾಧ್ಯತೆಗಳು ಉಂಟಾಗಿದೆ.