ರಾಮನಗರ: ಚನ್ನಪಟ್ಟಣದ ಪಟ್ಟಣದ ಸುತ್ತಮುತ್ತದಲ್ಲಿ ಜಾಗ ಖರೀದಿ ಮಾಡಿ ಶಿಕ್ಷಕರಿಗೆ ಪ್ರತ್ಯೇಕ ಲೇಔಟ್ ನಿರ್ಮಾಣಕ್ಕೆ ಅಗತ್ಯ ಕ್ರಮ ಹಾಗೂ ಭವ್ಯವಾದ ಗುರುಭವನವನ್ನು ಮಂಜೂರು ಮಾಡಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಭರವಸೆ ನೀಡಿದರು. ಮಾತನಾಡಿದ ಅವರು, ” ಇಲ್ಲಿ ಅನೇಕ ಶಿಕ್ಷಕರಿಗೆ ನಿವೇಶನ ಇಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದೀರಿ. ನಿಮಗೂ ನಿವೇಶನ ನೀಡುವ ಬಗ್ಗೆ ಚರ್ಚೆ ಮಾಡುತ್ತೇನೆ. ನೀವೇ ಗುರುಭವನ ಸ್ಥಾಪನೆಗೆ ಜಾಗ ಗುರುತಿಸಿ” ಎಂದರು.
ಮಾಜಿ ಮುಖ್ಯಮಂತ್ರಿಗಳು, ಉನ್ನತ ಹುದ್ದೆಯಲ್ಲಿದ್ದವರ ಕ್ಷೇತ್ರದಲ್ಲಿ ಗುರು ಭವನ ಇಲ್ಲವೇ? ಈಗಾಗಲೇ ತಾಲೂಕಿಗೆ ನೂರಾರು ಕೋಟಿ ವಿಶೇಷ ಅನುದಾನ ತಂದಿದ್ದೇನೆ. ನಾನು ಯಾರನ್ನೂ ದೂಷಿಸುವುದಿಲ್ಲ. ಕುಮಾರಸ್ವಾಮಿ ಆಗಲಿ, ಯೋಗೇಶ್ವರ್ ಅವರನ್ನಾಗಲಿ ದೂಷಣೆ ಮಾಡಿವುದಿಲ್ಲ. ಯಾರೇ ಆಗಲಿ ರಾಜಕೀಯದಲ್ಲಿ ಎಲ್ಲರಿಗೂ ಬದ್ಧತೆ ಇರಬೇಕು ಎಂದು ಹೇಳಿದರು.
ನಿಮಗೆ ಗೊತ್ತೆ..? ಇದೇ ಕಾರಣಕ್ಕೆ ಮಹಿಳೆಯರಲ್ಲಿ “ಸೆಕ್ಸ್” ವೇಳೆ ನೋವು ಕಾಣಿಸಿಕೊಳ್ಳುವುದು!
ಚುನಾವಣೆ ದೃಷ್ಟಿಯಿಂದ ನಾನು ಇಲ್ಲಿಗೆ ಬರುತ್ತಿಲ್ಲ. ನಾಲ್ಕು ಬಾರಿ ಈ ಭಾಗದ ಜನ ನನ್ನನ್ನು ಆಯ್ಕೆ ಮಾಡಿದ್ದೀರಿ. ನಾನು ಈ ಜಿಲ್ಲೆಯವನು. ನಾನು ಬೇರೆ ಎಲ್ಲೂ ಹೋಗಲು ಆಗುವುದಿಲ್ಲ. ನಾನು ಇಲ್ಲೇ ಹುಟ್ಟಿದ್ದೇನೆ, ಇಲ್ಲೇ ಸಾಯುತ್ತೇನೆ. ನಿಮ್ಮನ್ನು ಟೂರಿಂಗ್ ಟಾಕೀಸ್ ತರ ಬಳಸಲು ಆಗುವುದಿಲ್ಲ. ನೀವು ಹೃದಯವಂತಿಕೆಯಿಂದ ನಮಗೆ ಶಕ್ತಿ ನೀಡಬೇಕು ಎಂದು ಕೋರಿದರು.