ಗದಗ: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ನಡುವಣ ವಾಕ್ಸಮರ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಕೇಂದ್ರ ಸಚಿವರನ್ನು ನಿಂದಿಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಷ್ಟ್ರಪತಿ, ಕೇಂದ್ರ ಗೃಹ ಸಚಿವರಿಗೆ ಜೆಡಿಎಸ್ ಮನವಿ ಸಲ್ಲಿಸಿದೆ.
ಕುಮಾರಸ್ವಾಮಿ ವಿರುದ್ಧ ಪತ್ರದ ಮೂಲಕ ಹಂದಿಗೆ ಹೋಲಿಸಿ, ಚಂದ್ರಶೇಖರ್ ಟೀಕಿಸಿದ್ದಾರೆ. ಇದರಿಂದ ಕೇಂದ್ರ ಸಚಿವರಿಗೆ ಅಪಮಾನ ಮಾಡಲಾಗಿದೆ ಎಂದು ಚಂದ್ರಶೇಖರ್ ವಿರುದ್ದ ಕ್ರಮಕ್ಕೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.ಈ ವೇಳೆ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದ ಗೌಡರ್ ಮಾತನಾಡಿ, ವಿಷ್ಣುವಿನ ಅವತಾರ ಹಂದಿ.. ಅವ್ನು ಕುಮಾರಣ್ಣನನ್ನ ವಿಷ್ಣುವಿಗೆ ಹೋಲಿಸಿರಬೇಕು.
ನಿಮಗೆ ಗೊತ್ತೆ..? ಇದೇ ಕಾರಣಕ್ಕೆ ಮಹಿಳೆಯರಲ್ಲಿ “ಸೆಕ್ಸ್” ವೇಳೆ ನೋವು ಕಾಣಿಸಿಕೊಳ್ಳುವುದು!
ಯಾಕಂದ್ರೆ ಭೂಮಿಗೆ ಆಪತ್ತು ಬಂದಾಗ ವಿಷ್ಣು ಹಂದಿಯ ಅವತಾರ ಎತ್ತಿ ಭೂಮಿ ರಕ್ಷಿಸಿದ್ದ, ಈಗ ಭ್ರಷ್ಟರನ್ನ ಸಂಹಾರ ಮಾಡಲಿಕ್ಕೆ ಕುಮಾರಸ್ವಾಮಿ ಇದ್ದಾರೆ. ಚಂದ್ರಶೇಖರ್ ಅವರೇ.. ನಿಮ್ಮ ಇತಿಮಿತಿಯಲ್ಲಿರಿ, ನಿಮ್ಮ ಹೇಳಿಕೆಯನ್ನು ರಾಜ್ಯದ ಜನ, ಕಾರ್ಯಕರ್ತರು ಸಹಿಸಲ್ಲ ಆದ್ದರಿಂದ ಅಸಂವಿಧಾನಿಕ ಪದ ಬಳಸಿದ ಎಡಿಜಿಪಿ ಚಂದ್ರಶೇಖರ್ ವಾಪಾಸ್ ಕರೆಸಿಕೊಳ್ಳಬೇಕು. ಭ್ರಷಾಚಾರದ ಆರೋಪದ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.