ಬೆಂಗಳೂರು:- 14 ನಿವೇಶಗಳನ್ನು ವಾಪಡ್ ನೀಡುವುದಾಗಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ನಿರ್ಧರಿಸಿದ್ದಾರೆ. ಈ ಬಗ್ಗೆ ಖುದ್ದು ಪಾರ್ವತಿ ಅವರೇ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರಲ್ಲ: ಸಿದ್ದರಾಮಯ್ಯ ಟೀಕಿಸಿದ ಆರ್ ಅಶೋಕ್!
ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಇದು ಶರಣಾಗತಿಯೋ ಅಥವಾ ಡ್ಯಾಮೇಜ್ ಕಂಟ್ರೋಲಾ? ಪರಿಹಾರ ರೂಪದಲ್ಲಿ ಬಂದ 14 ಸೈಟ್ ಹಿಂತಿರುಗಿಸುತ್ತಿದ್ದಾರೆ. ಯಾಕೆ ಈ ನಿರ್ಧಾರ ತೆಗೆದುಕೊಂಡಿದ್ದೀರಿ. ಯಾಕೆ ಸೈಟ್ ಹಿಂತಿರುಗಿಸುತ್ತಿದ್ದೀರಿ. ವಾಮಮಾರ್ಗದಲ್ಲಿ ಸೈಟ್ ಪಡೆದಿದ್ದೀರೆಂದು ನಿಮಗೆ ಗೊತ್ತು. ಇದು ಅಧಿಕಾರದ ದುರುಪಯೋಗ. ಸ್ವಜನಪಕ್ಷಪಾದಿಂದ ಮಾಡಿರೋ ಕೆಲಸ ಇದು. ಮುಡಾ ಓಪನಲೀ ಶಟ್ ಆ್ಯಂಡ್ ಕೇಸ್ ಎಂದು ಬರೆದುಕೊಂಡಿದ್ದಾರೆ.